Monday, June 30, 2008

ಚತುರ್ವೇದ ಸ೦ಹಿತಾ ಯಾಗ ...


ತುಮಕೂರಿನ ಬಳಿಯ ಗುಬ್ಬಿ ಎ೦ಬ ಊರು ವೀರಣ್ಣ ನವರಂಥ ಮಹಾನ್ ಕಲಾ ತಪಸ್ವಿಯನ್ನು ನಾಡಿಗೆ ಕೊಟ್ಟ ಸ್ಥಳ . ಇಲ್ಲಿಗೆ ಸಮೀಪದಲ್ಲಿ ಇಕ ಹಿಂದೆ ಸ್ಥಾಪಿತವಾದ "ಚಿದಂಬರಾಶ್ರಮ" ಪ್ರಕೃತಿಯ ಸುಂದರ ಮಡಿಲಲ್ಲಿ ಕಂಗೊಳಿಸುವ ಪುಟ್ಟ ಆಶ್ರಮ . ವಿದ್ಯಾಕಾಂಕ್ಷಿಗಳಾಗಿ ಬಂದ ಮಕ್ಕಳಿಗೆ ಸನಾತನೀಯವಾದ ಉತ್ತಮ ಸಂಸ್ಕಾರಯುತ ಶಿಕ್ಷಣವನ್ನು ಉಚಿತವಾಗಿ ನೀಡುತ್ತಾ ಬಂದಿದೆ. ಮೊನ್ನೆ ದೂರದರ್ಶನದಲ್ಲಿ ಈ ಆಶ್ರಮದ ಬಗ್ಗೆ ಒಂದು ಕಾರ್ಯಕ್ರಮ ಬಂದಿತ್ತು. ಇಲ್ಲಿ ಚತುರ್ವೇದ ಸಂಹಿತಾ ಯಾಗವು ನಡೆಯಲಿದ್ದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಇತ್ಯಾದಿ ವಿವರಣೆ ಸಿಕ್ಕಿದ ನನಗೆ ಸಹಜವಾಗಿ ಆ ಕಡೆ ಆಕರ್ಷಣೆ ಉಂಟಾದದ್ದು ನನ್ನ ಪ್ರೀತಿಯ "ಯಕ್ಷಗಾನ ತಾಳಮದ್ದಲೆ " ಬಲಿಪ ಪ್ರಸಾದ ಭಾಗವತರ ತಂಡದಿಂದ ನಡೆಸಿಕೊಡಲ್ಪಡುತ್ತದೆ ಎಂಬ ವಿಚಾರ ತಿಳಿದಾಗ !
ಜೂನ್ 28ನೆ ಶನಿವಾರ ಹಾಗೂ ೨೯ನೆ ರವಿವಾರ ಬಲಿಪ ಬಳಗದ ಯಕ್ಷಗಾನ ತಾಳಮದ್ದಲೆ ನೋಡಲು ಹೋದ ನನಗೆ ಆಶ್ರಮವನ್ನು ಪ್ರವೇಶಿಸುತ್ತಿದ್ದಂತೆ ಪೂಜ್ಯ ಭಾವನೆ ಉಂಟಾಯಿತು . ಯಾಗ ಶಾಲೆನಿರ್ಮಾಣ ಅದ್ಭುತವಾಗಿತ್ತು .





ನಾಲ್ಕು ವೇದಗಳ ಮಂತ್ರಗಳ ಸಹಿತ ನಡೆಯುತ್ತಿದ್ದ ಈ ಯಾಗದಲ್ಲಿ ಬಹಳ ಅಪೂರ್ವವಾದ ಸಾಮಗಾನ ಕೇಳಲು ಕರ್ಣಾನಂದವಾಗಿತ್ತು. ಬಳಿಕ ನಡೆದ ಅಷ್ಟಾವಧಾನ ಸೇವೆಯಲ್ಲಿ ಬಲಿಪ ಪ್ರಸಾದ ರ ಸ್ತುತಿಪದವಂತೂ ಬಲು ಸುಂದರವಾಗಿತ್ತು .
ಶೂರ್ಪನಖಾ ಮಾನಭಂಗ ಹಾಗೂ ಕೃಷ್ಣ ಸಂಧಾನ ತಳಮದ್ದಾಳೆ ೨ ದಿನಗಳಂದು ಕ್ರಮವಾಗಿ ನಡೆದವು . ಯಾಗದ ಪೂರ್ಣಾಹುತಿ ಇದೆ ಬರುವ ಜುಲೈ ೨ ರಂದು ನಡೆಯಲಿದ್ದು ಆಸಕ್ತರು ಭಾಗವಹಿಸಬಹುದು .
ಚಿದಂಬರಾಶ್ರಮದ ಬಗ್ಗೆ ತಿಳಿಯಲು http://www.chidambaraashrama.org/ ತಾಣವನ್ನು ನೋಡಿ .

1 comment:

Ananth said...

The story regarding 'Samudra Mathana Aata' is really nice. Beautiful concept and very good presentation.

regards
Uma Venur
Sr. Sub-editor
Sudha
Bangalore