Thursday, July 3, 2008

ಯಕ್ಷ ದಿಗ್ಗಜರ ಸಮ್ಮಿಲನ ...

ಬಲಿಪ ನಾರಾಯಣ ಭಾಗವತರು , ದಿವಾಣ ಭೀಮ ಭಟ್ ಹಾಗೂ ನೆಡ್ಲೆ ನರಸಿಂಹ ಭಟ್ಟರದ್ದು ಒಂದು ಅಪೂರ್ವ ಸಮ್ಮಿಲನ .
http://www.youtube.com/watch?v=z9frEiHBvzk
ದಿವಾಣ ಭೀಮಜ್ಜ ವಿಷಮ ಪೆಟ್ಟು ಬಾರಿಸುವುದರಲ್ಲಿ ಎತ್ತಿದ ಕೈ ಆಗಿದ್ದರಂತೆ . ಚೆಂಡೆ ಮದ್ದಲೆಗಳಲ್ಲದೆ ಭಾಗವತಿಕೆಯನ್ನು ಕೂಡ ಅಮೂಲಾಗ್ರವಾಗಿ ತಿಳಿದಿದ್ದ ಭೀಮಜ್ಜ ವೇಷಧಾರಿಗಳನ್ನು ತಿದ್ದುವುದರಲ್ಲಿ ಪರಿಣತರಾಗಿದ್ದರಂತೆ . ಕೋಪ ಮೂಗಿನ ಮೇಲೆ ಇದ್ದ ಇವರಿಗೆ ಅಷ್ಟೆ ಮುಗ್ಧತೆಯೂ ಮೈಗೂಡಿತ್ತು ಎಂದು ಅಪ್ಪ ಆಗಾಗ ಮನೆಯಲ್ಲಿ ಹೇಳುತ್ತಿದ್ದುದುಂಟು .
ಇದನ್ನು ನೋಡುವಾಗ ಎಂಥ ಕಲಾವಿದರು ಕಾಲಗರ್ಭಕ್ಕೆ ಸಂದು ಹೋದರು ಎಂಬುದು ನಮಗರಿವಾಗುತ್ತದೆ .
ಮೇಲಿನ ಕೊಂಡಿಯಲ್ಲಿ ಈ ಅಪರೂಪದ ಕಲಾವಿದರಾದ ದಿವಾಣ ಭೀಮ ಭಟ್ ಹಾಗೂ ನೆಡ್ಲೆ ನರಸಿಂಹ ಭಟ್ ಬಲಿಪಜ್ಜರಿಗೆ ಸಾಥ್ ನೀಡಿದ್ದರು ನೋಡಿ ಆನಂದಿಸಿ...