Friday, February 29, 2008

ಚುಟುಕಗಳ ಬ್ರಹ್ಮ : ಶ್ರೀ ದಿನಕರ ದೇಸಾಯಿ

ಚುಟುಕಗಳು ಜನ ಮಾನಸವನ್ನು ಬೇಗನೆ ತಲುಪುತ್ತವೆ. ಶ್ರೀಯುತ ದಿನಕರ ದೇಸಾಯಿಯವರು ಮೊತ್ತ ಮೊದಲಿಗೆ ನಾಲ್ಕು ಸಾಲುಗಳ ಈ ಪ್ರಕಾರವನ್ನು ಆರಂಭಿಸಿ ಜನಪ್ರಿಯರಾದವರು. ಅವರ ಚುಟುಕಗಳ ಸಂಪುಟವೊಂದನ್ನು ಕನ್ನಡ ಸಾಹಿತ್ಯ ಪರಿಷತ್ ಬಿಡುಗಡೆ ಮಾಡಿದ್ದು ಆಸಕ್ತರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ .
ಅದರಲ್ಲಿ ಪ್ರಕಟವಾದ ಒಂದು ಚುಟುಕ ಹೀಗಿದೆ :

ಯಾರಿಗೂ ಕೊಡದೆ ನಾಳೆ ತಿನ್ನುವೆನೆಂದು
ಅಡಗಿಸಿಟ್ಟೆನು ಹಣ್ಣನೊಂದನು ತಂದು
ಮುಂಜಾನೆ ನೋಡಿದರೆ ಬರಿ ಸಿಪ್ಪೆ
ರಾತ್ರಿಯಲಿ ತಿಂದದ್ದು ಮೂಷಿಕನ ತಪ್ಪೆ ?

ಇನ್ನು ಹಲವಾರು ಉತ್ತಮ ಚುಟುಕ ಈ ಪುಸ್ತಕದಲ್ಲಿ ಪ್ರಕಟವಾಗಿದೆ . ಅವಕಾಶವಾದಲ್ಲಿ ಓದಿ ಆನಂದಿಸಿ ......

Wednesday, February 27, 2008

ನಮಸ್ಕಾರ..


ಮನುಷ್ಯ ಪ್ರಯತ್ನಶೀಲನಾಗಿರಬೇಕು . ಏನನ್ನಾದರೂ ಸಾಧಿಸಬೇಕು ಎಂಬ ಹಂಬಲವಿದ್ದರೆ ಮಾತ್ರ ಜೀವನದಲ್ಲಿ ಮೇಲೇರಲು ಸಾಧ್ಯ .
ಸಾಧಿಸಬೇಕೆಂಬ ಮನಸ್ಸಿದೆ ಆದ್ರೆ ಸಮಯವೇ ಇಲ್ಲ ! ಎಷ್ಟೋ ಜನ ಮಿತ್ರರ ಉವಾಚ ಇದು . ನಾನೂ ಒಂದು ಬರೆಯುವ ಪ್ರಯತ್ನ ಮಾಡಿದರೇನು ? ಎಂಬ ಉತ್ಸಾಹದಿಂದ ಬರೆಯಲು ತೊಡಗಿದ್ದೇನೆ . ಹುಚ್ಚು ಮನಸ್ಸಿನ ಹಲವು ಮುಖಗಳನ್ನೂ , ಸೋತದ್ದು , ಗೆದ್ದಂತೆ ಭಾಸವಾಗಿ ಹೊಡೆಸಿ ಕೊಂಡದ್ದು ! , ಪೇಚಾಟಕ್ಕೆ ಸಿಲುಕಿದ್ದು, ಕ್ಷೇತ್ರಗಳು , ವಿಶಿಷ್ಟ ಸಾಧನೆಗೈದ ಮಹನೀಯರು ಹೀಗೆ ಹತ್ತು ಹಲವು ವಿಚಾರಗಳ " ಅವಿಲು" ಈ ನಮ್ಮ ಬಲ್ಲಿರೇನಯ್ಯ....

ಓದಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ..
ನಿಮ್ಮ ಪ್ರೋತ್ಸಾಹ ನನಗೆ ಸ್ಪೂರ್ತಿ ....
ತೊಡಗಲೇ.........???