
ಶ್ರೀಮತಿ ಲೀಲಾವತಿ ಬೈಪಡಿತ್ತಾಯರು ನಮ್ಮ ಮನೆಗೆ ಬಂದಿದ್ದಾಗ ಹೇಳಿದ್ದು "ಇತ್ತೀಚೆಗೆ ಮಾಡಿದ್ದೇ ಯಕ್ಷಗಾನ ಅಂತ ಆಗಿದೆ. ಯಾವಾಗ ಯಕ್ಷಗಾನವು ವ್ಯಾಪರೀಕರಣವಾಗತೊಡಗಿತೋ ಬೈಪಾಡಿತ್ತಾಯ ಯಕ್ಷಗಾನದ ಒಂದೊಂದೇ ಕ್ರಮಗಳು ಗಾಳಿಗೆ ತೂರಲ್ಪಟ್ಟು ಈಗ ಮಾಡಿದ್ದೆಲ್ಲ ಯಕ್ಷಗಾನ ಅನ್ನುವಂತಾಗಿದೆ !!"
ಪಟ ಪಟ ಗಾಳಿ ಪಟ ....... ಪದ್ಯವೂ ಬಡಗಿನ ರಂಗಸ್ಥಳದಲ್ಲಿ ಕಂಡಾಗ ನನಗೂ ಮೇಲಿನ ಮಾತುಗಳು ಸತ್ಯ ಅನಿಸಿತ್ತು.
ತೆಂಕು ತಿಟ್ಟಿನಲ್ಲಿ ಮೊದಲ ಮಹಿಳಾ ಭಾಗವತರಾದ ಶ್ರೀಮತಿ ಲೀಲಾವತಿ ಬೈಪಡಿತ್ತಾಯರು ತಮ್ಮ ಪತಿ ಶ್ರೀ ಹರಿನಾರಾಯಣ ಬೈಪಡಿತ್ತಾಯರಿಂದ ಬಾಗವತಿಕೆಯನ್ನು ಕಲಿತು ಸುಬ್ರಮಣ್ಯ , ಮದೂರು , ಅಳದಂಗಡಿ ಮೇಳಗಳಲ್ಲಿ ತಿರುಗಾಟ ನಡೆಸಿ ಅನುಭವ ಸಂಪನ್ನರಾಗಿದ್ದಾರೆ. ಯಾವುದೇ ಪುರಾಣಿಕ ಪ್ರಸ೦ಗವನ್ನು ಆಡಿಸಲು ಸಮರ್ಥ ರಾಗಿರುವ ಇವರು ಯಕ್ಷಗಾನ ಬಾಗವತಿಕೆಯನ್ನು ಕಲಿಸುತ್ತಿದ್ದು ಹಲವಾರು ಶಿಷ್ಯವರ್ಗ ಹೊಂದಿದ್ದಾರೆ .
ಇವರ ಹಾಡನ್ನು ಇಲ್ಲಿ ಕೇಳಿ ಆನಂದಿಸಬಹುದು.http://oyakshagana.googlepages.com/audios.htm
No comments:
Post a Comment