ಚುಟುಕಗಳು ಜನ ಮಾನಸವನ್ನು ಬೇಗನೆ ತಲುಪುತ್ತವೆ. ಶ್ರೀಯುತ ದಿನಕರ ದೇಸಾಯಿಯವರು ಮೊತ್ತ ಮೊದಲಿಗೆ ನಾಲ್ಕು ಸಾಲುಗಳ ಈ ಪ್ರಕಾರವನ್ನು ಆರಂಭಿಸಿ ಜನಪ್ರಿಯರಾದವರು. ಅವರ ಚುಟುಕಗಳ ಸಂಪುಟವೊಂದನ್ನು ಕನ್ನಡ ಸಾಹಿತ್ಯ ಪರಿಷತ್ ಬಿಡುಗಡೆ ಮಾಡಿದ್ದು ಆಸಕ್ತರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ .
ಅದರಲ್ಲಿ ಪ್ರಕಟವಾದ ಒಂದು ಚುಟುಕ ಹೀಗಿದೆ :
ಯಾರಿಗೂ ಕೊಡದೆ ನಾಳೆ ತಿನ್ನುವೆನೆಂದು
ಅಡಗಿಸಿಟ್ಟೆನು ಹಣ್ಣನೊಂದನು ತಂದು
ಮುಂಜಾನೆ ನೋಡಿದರೆ ಬರಿ ಸಿಪ್ಪೆ
ರಾತ್ರಿಯಲಿ ತಿಂದದ್ದು ಮೂಷಿಕನ ತಪ್ಪೆ ?
ಇನ್ನು ಹಲವಾರು ಉತ್ತಮ ಚುಟುಕ ಈ ಪುಸ್ತಕದಲ್ಲಿ ಪ್ರಕಟವಾಗಿದೆ . ಅವಕಾಶವಾದಲ್ಲಿ ಓದಿ ಆನಂದಿಸಿ ......
Friday, February 29, 2008
Subscribe to:
Post Comments (Atom)
No comments:
Post a Comment