Tuesday, May 27, 2008

ನಾನಿಲ್ಲದೇ ಅದ್ ಹೇಗೆ ಮಾಡ್ತೀರಿ ನೋಡ್ತೇನೆ ....!!!

ದೇವೇಗೌಡ ಹೇಳಿದ ಮಾತು ಮಾರಾಯರೇ ...
ಎಂತ ಕೊಬ್ಬು ನೋಡಿ ಮುದುಕನಿಗೆ !
ನಾನು ಮಾಡುವುದು "ದಿಲ್ಲಿ ರಾಜಕೀಯ ಅಲ್ಲ ; ಹಳ್ಳಿ ರಾಜಕೀಯ " ಅಂತ ಪತ್ರಿಕಾ ಹೇಳಿಕೆ ಕೊಟ್ಟಾಗಲೇ ಮುದುಕನಿಗೆ ಮಂಡೆ ಸರಿ ಇಲ್ಲ ಎಂಬುದು ಎಲ್ಲ ಜನಕ್ಕೂ ಗೊತ್ತಾಗಿತ್ತು . ಅದಕ್ಕೆ ಸರಿಯಾಗಿ ಮತದಾರ ಪ್ರಭು ಈ ಸಲ ಕಲಿಸಿದ ನೋಡಿ !
ಈಗ ಮಗ ಹೇಳುವುದು ನಮ್ಮದು "ಪಿತೃ ಪಕ್ಷ !!" ಅಪ್ಪ ಹೇಳುವುದು ನಮ್ಮದು " ಪುತ್ರ ಪಕ್ಷ " !!
ಹೊಂಡಕ್ಕೆ ಬಿದ್ದ ಮೇಲೂ ಮಂಡೆ ಆಡಿಸಿದರು ಅಂತ ಆಗಿದೆ ಈಗ !!

ಅತ್ತ ಕಡೆ ಬಂಗಾರಪ್ಪ ಅಂಡ್ ಕೋ. ಎಲ್ಲ ಮನೆಯಲ್ಲಿ ಎಳ್ಳೆಣ್ಣೆ ದೀಪ ಹಚ್ಚಿ " ನಮೋ ನಮೋ ಶನಿರಾಯಾ .... " ಭಜನೆ ಮಾಡುವಂತೆ ಮಾಡಿದ ಮತಭಾಂಧವರಿಗೆ ಕೋಟಿ ನಮನಗಳು ..
ಆಸೆ ಇರ್ಬೇಕು ದುರಾಸೆ ಅಲ್ಲ !!
ಇನ್ನು ನಮ್ಮ ಜೇವರ್ಗಿ ಆನೆ " ಘರಂ ಸಿಂಗ್ " ಪೋಸ್ಟಲ್ ವೋಟು ತೆರೆದಾಗ ಸೋತದ್ದು !!!
ಪಾಪ ಈ ಸಲನೂ ಗೆದ್ದು ಎಲ್ಲ ಜಿಲ್ಲಾ ಕೇಂದ್ರಗಳಲ್ಲು ಒಂದೊಂದು ಸ್ವಂತ ಮನೆ ಕಟ್ಟಿಸಿಕೊಳ್ಳುವ ತವಕದಲ್ಲಿದ್ದ ಸಾಯೀಬ್ರಿಗೆ ಮತದಾರ ಹಾಕಿದ ಬಾಂಬು ನೋಡಿ !!!
ಭಾ.ಜ.ಪ. ದ ಬಸವರಾಜ ಯಥ್ನಾಲ್ ಮತ ಎಣಿಕೆ ಮುನ್ನ ದಿನ ತಮ್ಮ " ಮುರ ಎಮ್ಮೆ " ಗಳಿಗೆ ಹುಲ್ಲು ಹಾಕಿ ಬಂದಿದ್ದಂತೆ !(ವಿಜಯ ಕರ್ನಾಟಕ ಸುದ್ದಿ) ನಿನಗೆ ಅದೇ ಬೆಸ್ಟು ಮಗನೆ ಅಂತ ಅವರನ್ನು ಮನೆಯಲೇ ಕುಳ್ಳಿರಿಸಿದ ಆ ಕ್ಷೇತ್ರದ ಎಲ್ಲ ಮತದಾರರೂ ಅಭಿನಂದನಾರ್ಹರು !
ಮಿರಾಜುದ್ದೀನ್ ಪಟೀಲರ ಬಗ್ಗೆ " ಅರುಹಿ ಪಲವೇನ್ ಅಂತ್ಯ ಕಾಲದಿ....." !!

ಅಂತೂ ಈ ಸಲದ್ದು ನೋಡಿ ಚುಣಾವಣೆ ಅಂದ್ರೆ !
ಈಗ ಪಕ್ಷೆತರರು ಹೇಳಬಹುದು "ನಾನಿಲ್ಲದೇ ಅದ್ ಹೇಗೆ ಮಾಡ್ತೀರಿ ನೋಡ್ತೇನೆ ....!!! "

ಎಲ್ಲ ನಿನ್ನ ಲೀಲೆ ಪ್ರಬ್ಹೋ ಸಂಭುಲಿಂಗಾ........

3 comments:

Subbu said...

Yes. Superb blog. I was very happy that Devegowda lost completely in this election. Keep writing and send me the links.

vyshubhat said...

Bangarappa matte avana makka sotha hange Devegowdana makkalu solekkitthu.

ಜಾತ್ರೆ said...

Registration- Seminar on the occasion of kannadasaahithya.com 8th year Celebration

ಪ್ರೀತಿಯ ಅಂತರ್ಜಾಲ ಸ್ನೇಹಿತರೆ,

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english

http://saadhaara.com/events/index/kannada
ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.

-ಕನ್ನಡಸಾಹಿತ್ಯ.ಕಾಂ ಬಳಗ