ದೇವೇಗೌಡ ಹೇಳಿದ ಮಾತು ಮಾರಾಯರೇ ...
ಎಂತ ಕೊಬ್ಬು ನೋಡಿ ಮುದುಕನಿಗೆ !
ನಾನು ಮಾಡುವುದು "ದಿಲ್ಲಿ ರಾಜಕೀಯ ಅಲ್ಲ ; ಹಳ್ಳಿ ರಾಜಕೀಯ " ಅಂತ ಪತ್ರಿಕಾ ಹೇಳಿಕೆ ಕೊಟ್ಟಾಗಲೇ ಮುದುಕನಿಗೆ ಮಂಡೆ ಸರಿ ಇಲ್ಲ ಎಂಬುದು ಎಲ್ಲ ಜನಕ್ಕೂ ಗೊತ್ತಾಗಿತ್ತು . ಅದಕ್ಕೆ ಸರಿಯಾಗಿ ಮತದಾರ ಪ್ರಭು ಈ ಸಲ ಕಲಿಸಿದ ನೋಡಿ !
ಈಗ ಮಗ ಹೇಳುವುದು ನಮ್ಮದು "ಪಿತೃ ಪಕ್ಷ !!" ಅಪ್ಪ ಹೇಳುವುದು ನಮ್ಮದು " ಪುತ್ರ ಪಕ್ಷ " !!
ಹೊಂಡಕ್ಕೆ ಬಿದ್ದ ಮೇಲೂ ಮಂಡೆ ಆಡಿಸಿದರು ಅಂತ ಆಗಿದೆ ಈಗ !!
ಅತ್ತ ಕಡೆ ಬಂಗಾರಪ್ಪ ಅಂಡ್ ಕೋ. ಎಲ್ಲ ಮನೆಯಲ್ಲಿ ಎಳ್ಳೆಣ್ಣೆ ದೀಪ ಹಚ್ಚಿ " ನಮೋ ನಮೋ ಶನಿರಾಯಾ .... " ಭಜನೆ ಮಾಡುವಂತೆ ಮಾಡಿದ ಮತಭಾಂಧವರಿಗೆ ಕೋಟಿ ನಮನಗಳು ..
ಆಸೆ ಇರ್ಬೇಕು ದುರಾಸೆ ಅಲ್ಲ !!
ಇನ್ನು ನಮ್ಮ ಜೇವರ್ಗಿ ಆನೆ " ಘರಂ ಸಿಂಗ್ " ಪೋಸ್ಟಲ್ ವೋಟು ತೆರೆದಾಗ ಸೋತದ್ದು !!!
ಪಾಪ ಈ ಸಲನೂ ಗೆದ್ದು ಎಲ್ಲ ಜಿಲ್ಲಾ ಕೇಂದ್ರಗಳಲ್ಲು ಒಂದೊಂದು ಸ್ವಂತ ಮನೆ ಕಟ್ಟಿಸಿಕೊಳ್ಳುವ ತವಕದಲ್ಲಿದ್ದ ಸಾಯೀಬ್ರಿಗೆ ಮತದಾರ ಹಾಕಿದ ಬಾಂಬು ನೋಡಿ !!!
ಭಾ.ಜ.ಪ. ದ ಬಸವರಾಜ ಯಥ್ನಾಲ್ ಮತ ಎಣಿಕೆ ಮುನ್ನ ದಿನ ತಮ್ಮ " ಮುರ ಎಮ್ಮೆ " ಗಳಿಗೆ ಹುಲ್ಲು ಹಾಕಿ ಬಂದಿದ್ದಂತೆ !(ವಿಜಯ ಕರ್ನಾಟಕ ಸುದ್ದಿ) ನಿನಗೆ ಅದೇ ಬೆಸ್ಟು ಮಗನೆ ಅಂತ ಅವರನ್ನು ಮನೆಯಲೇ ಕುಳ್ಳಿರಿಸಿದ ಆ ಕ್ಷೇತ್ರದ ಎಲ್ಲ ಮತದಾರರೂ ಅಭಿನಂದನಾರ್ಹರು !
ಮಿರಾಜುದ್ದೀನ್ ಪಟೀಲರ ಬಗ್ಗೆ " ಅರುಹಿ ಪಲವೇನ್ ಅಂತ್ಯ ಕಾಲದಿ....." !!
ಅಂತೂ ಈ ಸಲದ್ದು ನೋಡಿ ಚುಣಾವಣೆ ಅಂದ್ರೆ !
ಈಗ ಪಕ್ಷೆತರರು ಹೇಳಬಹುದು "ನಾನಿಲ್ಲದೇ ಅದ್ ಹೇಗೆ ಮಾಡ್ತೀರಿ ನೋಡ್ತೇನೆ ....!!! "
ಎಲ್ಲ ನಿನ್ನ ಲೀಲೆ ಪ್ರಬ್ಹೋ ಸಂಭುಲಿಂಗಾ........
Tuesday, May 27, 2008
Subscribe to:
Post Comments (Atom)
2 comments:
Yes. Superb blog. I was very happy that Devegowda lost completely in this election. Keep writing and send me the links.
Bangarappa matte avana makka sotha hange Devegowdana makkalu solekkitthu.
Post a Comment