Thursday, May 29, 2008

ಗೋ೦ಕುರು ಕಪ್ಪೆ ....


ಕಪ್ಪೆಯನ್ನು ಕುರಿತ ಪಾಠಗಳು ಎಲ್ಲರೂ ಒಂದಲ್ಲ ಒಂದು ತರಗತಿಯಲ್ಲಿ ಅಲ್ಪ ಸ್ವಲ್ಪವಾದರೂ ಓದಿಯೇ ಇರುತ್ತೇವೆ . ಮಳೆಗಾಲ ಆರಂಭವಾಯಿತೆಂದರೆ ಸಾಕು ಕಪ್ಪೆಗಳ ಸಂಗೀತ ಆರಂಭವಾಗುತ್ತದೆ . ಸಣ್ಣ ಸಣ್ಣ ಚೊಂದಗಪ್ಪೆಯಿಂದ ಹಿಡಿದು ದೊಡ್ಡ ಗಾತ್ರದ ಗೋ೦ಕುರು ಕಪ್ಪೆ ವರೆಗೆ ನಾನಾ ಗಾತ್ರದ ಕಪ್ಪೆಗಳು ಹರ್ಷದಿಂದ ಮಳೆಗಾಲವನ್ನು ಸ್ವಾಗತಿಸುತ್ತವೆ .
ಹೈ ಸ್ಕೂಲ್ ನಲ್ಲಿದ್ದಾಗ ದೇವಸ್ಥಾನದ ಭಜನೆ ಕಾರ್ಯಕ್ರಮ ಮುಗಿಸಿ ರಾತ್ರಿ ಸುಮಾರು ಏಳೂವರೆ ಸುಮಾರಿಗೆ ಮಲೆನಾಡಿನ ನೀರವ ಮೌನ ತುಂಬಿದ ಕಾಡಿನ ದಾರಿಯಲ್ಲಿ ಮನೆಗೆ ಬರುವಾಗ ದಾರಿ ಬದಿಯ ತೋಡಿನಲ್ಲಿ ಆನಂದದಿಂದ ಸರದಿ ಪ್ರಕಾರ ಕೇಳಿ ಬರುತ್ತಿದ್ದ ಗೋ೦ಕುರು ಕಪ್ಪೆಗಳ ಸುಮಧುರ ಸಂಗೀತ ಕೇಳಿದಾಗ ಒಂದು ರೀತಿಯ ಅಹ್ಲಾದಕರ ಅನುಭವ ಆಗುತ್ತಿತ್ತು.
ನಾವು ಚಿಕ್ಕವರಿದ್ದಾಗ ಮನೆಗೆ ತೋಟದ ಕೆಲಸಕ್ಕೆ ಬರುತ್ತಿದ್ದ ಕುಂಟ ಈಸುಬ್ಬು ಕಾಕ ಆಗಾಗ ಹೇಳುತ್ತಿದ್ದರು " ಅಮೆರಿಕೊಡು ಗೋ೦ಕುರು ಕಪ್ಪೆನ್ ಮಾತ ತಿನ್ಪೆರ್ಗೆ !!" (ಅಮೆರಿಕಾದಲ್ಲಿ ಗೋ೦ಕುರು ಕಪ್ಪೆಯನ್ನು ತಿನ್ನುತ್ತರಂತೆ !). ಆಗ ನಾವೆಲ್ಲ ಛೀ ......
ಎಂದು ಹೇಸಿಗೆ ಪಡುತ್ತಿದ್ದೆವು . ಕಪ್ಪೆಯ ಮೂತ್ರ ಮೈಮೇಲೆ ಬಿದ್ದರೆ "ಕೆಡು " ಆಗುತ್ತದೆ ಎಂಬ ನಂಬಿಕೆ ಆಗಲೂ ಜನರ ಮನದಲ್ಲಿದೆ !
ನಿಜವಾಗಿಯೂ ಇತ್ತೀಚೆಗೆ ಗೋ೦ಕುರು ಕಪ್ಪೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕಪ್ಪೆಗಳನ್ನು ಸೂಪ್ ಮಾಡಿ ತಿನ್ನುವ ವರ್ಗ ಬೆಂಗಳೂರಿನಲ್ಲಿಯೇ ಇದ್ದಾರೆ ಎಂದು ತಿಳಿದಾಗ ಮಾತ್ರ ಅಚ್ಚರಿಯಾಯಿತು !
ಹಿಂದೆ ನಮ್ಮಲ್ಲಿಗೆ ಕೆಲಸಕ್ಕೆ ಬರುತ್ತಿದ್ದ ಸಂಕಪ್ಪ , ಅಣ್ನು, ಬೂಬ ಕಪ್ಪೆಗಳನ್ನು ಹಿಡಿದು ಕಾಲೇಜಿನ ಜೀವಶಾಸ್ತ್ರ ವಿಭಾಗಕ್ಕೆ ಕೊಟ್ಟು ಕಪ್ಪೆಯೊಂದಕ್ಕೆ ತಲಾ ಒಂದು ರೂಪಾಯಿ ಪಡೆಯುತ್ತಿದ್ದುದನ್ನು ಕಂಡಿದ್ದೇನೆ . ಬಹಳಷ್ಟು ಕಪ್ಪೆಗಳನ್ನು ಹಿಡಿದು ವಿದೇಶಕ್ಕೆ ರವಾನಿಸಿದ ಬಗ್ಗೆ ಪತ್ರಿಕೆಯಲ್ಲಿ ಅಂಕಣವೊಂದನ್ನು ಓದಿದ್ದೆ . ಸುಮ್ಮನೆ ಪ್ರಚಾರಕ್ಕೊಸ್ಕರ ಈ ರೀತಿ ಬರೆದಿದ್ದರೆನ್ದುಕೊಂಡಿದ್ದ ನಾನು ಇದು ಸತ್ಯ ಎಂದು ತಿಳಿಯುವ ವೇಳೆಗೆ ಅದೆಷ್ಟು ಕಪ್ಪೆಗಳು ಯಾರ್ಯಾರ ಹೊಟ್ಟೆ ಸೇರಿದ್ದವೋ ತಿಳಿಯೆ!
ಈಗ ಊರಿನಲ್ಲಿ "ಕಪ್ಪೆಗಳ ಸಮ್ಮೇಳನ " ಕೇಳುವುದಕ್ಕೆ ಸಿಗುತ್ತಿಲ್ಲ . ಅಲ್ಲೊಂದು ಇಲ್ಲೊಂದು ಕಪ್ಪೆ ಕ್ಷೀಣ ದ್ವನಿಯಲ್ಲಿ ಹರ್ಷಾಚರಣೆ ಮಾಡುವುದನ್ನು ಬಿಟ್ಟರೆ ಬೇರೇನೂ ಇಲ್ಲ . ಆಹಾರ ಸರಪಣಿ ಕಡಿದು ಹೋಗುತ್ತಿದೆ ; ಪ್ರಕೃತಿ ಸಮತೋಲನ ಏರುಪೇರಾಗುತ್ತಿದೆ.
ಆದರೆ ನಾವಿನ್ನೂ " ಇದೆಲ್ಲ ನಮಗ್ಯಾಕೆ?? " ಎಂಬ ಭಾವನೆಯಲ್ಲೇ ಇದ್ದೇವೆ !!
ಮು೦ದೊಂದು ದಿನ "ಮಗಾ ಇದಾ ನೋಡು ಕೆಪ್ಪೆ " ಅಂತ ಚಿತ್ರದಲ್ಲಿ ಮಕ್ಕಳಿಗೆ ತೋರಿಸಿ ತೃಪ್ತಿ ಪಡಬೇಕು ಅಷ್ಟೆ !

Tuesday, May 27, 2008

ನಾನಿಲ್ಲದೇ ಅದ್ ಹೇಗೆ ಮಾಡ್ತೀರಿ ನೋಡ್ತೇನೆ ....!!!

ದೇವೇಗೌಡ ಹೇಳಿದ ಮಾತು ಮಾರಾಯರೇ ...
ಎಂತ ಕೊಬ್ಬು ನೋಡಿ ಮುದುಕನಿಗೆ !
ನಾನು ಮಾಡುವುದು "ದಿಲ್ಲಿ ರಾಜಕೀಯ ಅಲ್ಲ ; ಹಳ್ಳಿ ರಾಜಕೀಯ " ಅಂತ ಪತ್ರಿಕಾ ಹೇಳಿಕೆ ಕೊಟ್ಟಾಗಲೇ ಮುದುಕನಿಗೆ ಮಂಡೆ ಸರಿ ಇಲ್ಲ ಎಂಬುದು ಎಲ್ಲ ಜನಕ್ಕೂ ಗೊತ್ತಾಗಿತ್ತು . ಅದಕ್ಕೆ ಸರಿಯಾಗಿ ಮತದಾರ ಪ್ರಭು ಈ ಸಲ ಕಲಿಸಿದ ನೋಡಿ !
ಈಗ ಮಗ ಹೇಳುವುದು ನಮ್ಮದು "ಪಿತೃ ಪಕ್ಷ !!" ಅಪ್ಪ ಹೇಳುವುದು ನಮ್ಮದು " ಪುತ್ರ ಪಕ್ಷ " !!
ಹೊಂಡಕ್ಕೆ ಬಿದ್ದ ಮೇಲೂ ಮಂಡೆ ಆಡಿಸಿದರು ಅಂತ ಆಗಿದೆ ಈಗ !!

ಅತ್ತ ಕಡೆ ಬಂಗಾರಪ್ಪ ಅಂಡ್ ಕೋ. ಎಲ್ಲ ಮನೆಯಲ್ಲಿ ಎಳ್ಳೆಣ್ಣೆ ದೀಪ ಹಚ್ಚಿ " ನಮೋ ನಮೋ ಶನಿರಾಯಾ .... " ಭಜನೆ ಮಾಡುವಂತೆ ಮಾಡಿದ ಮತಭಾಂಧವರಿಗೆ ಕೋಟಿ ನಮನಗಳು ..
ಆಸೆ ಇರ್ಬೇಕು ದುರಾಸೆ ಅಲ್ಲ !!
ಇನ್ನು ನಮ್ಮ ಜೇವರ್ಗಿ ಆನೆ " ಘರಂ ಸಿಂಗ್ " ಪೋಸ್ಟಲ್ ವೋಟು ತೆರೆದಾಗ ಸೋತದ್ದು !!!
ಪಾಪ ಈ ಸಲನೂ ಗೆದ್ದು ಎಲ್ಲ ಜಿಲ್ಲಾ ಕೇಂದ್ರಗಳಲ್ಲು ಒಂದೊಂದು ಸ್ವಂತ ಮನೆ ಕಟ್ಟಿಸಿಕೊಳ್ಳುವ ತವಕದಲ್ಲಿದ್ದ ಸಾಯೀಬ್ರಿಗೆ ಮತದಾರ ಹಾಕಿದ ಬಾಂಬು ನೋಡಿ !!!
ಭಾ.ಜ.ಪ. ದ ಬಸವರಾಜ ಯಥ್ನಾಲ್ ಮತ ಎಣಿಕೆ ಮುನ್ನ ದಿನ ತಮ್ಮ " ಮುರ ಎಮ್ಮೆ " ಗಳಿಗೆ ಹುಲ್ಲು ಹಾಕಿ ಬಂದಿದ್ದಂತೆ !(ವಿಜಯ ಕರ್ನಾಟಕ ಸುದ್ದಿ) ನಿನಗೆ ಅದೇ ಬೆಸ್ಟು ಮಗನೆ ಅಂತ ಅವರನ್ನು ಮನೆಯಲೇ ಕುಳ್ಳಿರಿಸಿದ ಆ ಕ್ಷೇತ್ರದ ಎಲ್ಲ ಮತದಾರರೂ ಅಭಿನಂದನಾರ್ಹರು !
ಮಿರಾಜುದ್ದೀನ್ ಪಟೀಲರ ಬಗ್ಗೆ " ಅರುಹಿ ಪಲವೇನ್ ಅಂತ್ಯ ಕಾಲದಿ....." !!

ಅಂತೂ ಈ ಸಲದ್ದು ನೋಡಿ ಚುಣಾವಣೆ ಅಂದ್ರೆ !
ಈಗ ಪಕ್ಷೆತರರು ಹೇಳಬಹುದು "ನಾನಿಲ್ಲದೇ ಅದ್ ಹೇಗೆ ಮಾಡ್ತೀರಿ ನೋಡ್ತೇನೆ ....!!! "

ಎಲ್ಲ ನಿನ್ನ ಲೀಲೆ ಪ್ರಬ್ಹೋ ಸಂಭುಲಿಂಗಾ........

Tuesday, May 20, 2008

ಪುರಾಣ ಲೋಕದ ಬಾಲರು .....

ನಾವು ಚಿಕ್ಕವರಿದ್ದಾಗ ಮಲಗುವ ಮುನ್ನ ಅಮ್ಮ ಹೇಳುತ್ತಿದ್ದ ಕುತೂಹಲಭರಿತ ಸ್ವಾರಸ್ಯಪೂರ್ಣ ಕಥೆಗಳು ನಮ್ಮನ್ನು ಪುರಾಣ ಲೋಕಕ್ಕೆ ಕೊಂಡೊಯ್ಯುತ್ತಿದ್ದವು . ಕ್ರಮೇಣ ಪೌರಾಣಿಕ ಯಕ್ಷಗಾನಗಳು ಪೌರಾಣಿಕ ಕಥೆಗಳಲ್ಲಿರುವ ಮೌಲ್ಯಗಳನ್ನು ನವರಸಭರಿತವಾಗಿ ಕಣ್ಣ ಮುಂದೆ ತೆರೆದಿಡುತ್ತಿದ್ದ ರೀತಿ ಅನನ್ಯ .

ಇತ್ತೀಚೆಗೆ ಪುರಾಣ ಕಥೆಗಳನ್ನು ಹೇಳುವ ಅಮ್ಮಂದಿರ ಸಂಖ್ಯೆ ಕ್ಷೀಣಿಸುತ್ತಿದ್ದು ಮಕ್ಕಳು ದೂರದರ್ಶನವನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಉಂಟಾಗುತ್ತಿದೆ. ಇದಕ್ಕೆ ಪುರಾಣ ಕಥೆಗಳ ಪುಸ್ತಕದ ಕೊರತೆಯೂ ಒಂದು ಕಾರಣವಿರಬಹುದು . ಹಲವು ಸಮಯ ಹಿಂದೆ ವಾರಕ್ಕೊಮ್ಮೆ ಉದಯವಾಣಿ ದಿನ ಪತ್ರಿಕೆಯ ಸಾಪ್ತಾಹಿಕ ಪುರವಣಿಯಲ್ಲಿ " ಪುರಾಣ ಬಾಲರು " ಎಂಬ ಕಥಾಮಾಲಿಕೆಯನ್ನು ಧರ್ಮಸ್ಥಳ ಮೇಳದ ಕಲಾವಿದರಾದ ಶ್ರೀ ತಾರಾನಾಥ ಬಲ್ಯಾಯರು ಬರೆಯುತ್ತಿದ್ದು ಅದೀಗ "ಪುರಾಣ ಲೋಕದ ಬಾಲರು" ಎಂಬ ಪುಸ್ತಕವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಸುಮಾರು ೧೫೦ ವಿವಿಧ ಪುರಾಣದ ಬಾಲಕರ ಕುರಿತ ಕಥೆಗಳು ಇದರಲ್ಲಿ ಸ್ವಾರಸ್ಯಪೂರ್ಣವಾಗಿ ವಿವರಿಸುವುದರ ಜೊತೆಗೆ ಅವರ ಜೀವನದಿಂದ ಕಲಿಯಬಹುದಾದ ನೀತಿಯನ್ನು ಕೊನೆಯಲ್ಲಿ ಕೊಡಲಾಗಿದೆ . ಇದೊಂದು ಸಂಗ್ರಹಯೋಗ್ಯ ಪುಸ್ತಕವಾಗಿದ್ದು ಎಲ್ಲ ವಯೋಮಾನದವರಿಗೂ ಓದಿ ತಿಳಿದುಕೊಳ್ಳಲು ಸಹಕಾರಿಯಾಗಿದೆ . ಇದನ್ನು ಓದಿದಲ್ಲಿ ಮಕ್ಕಳಿಗೆ ಕಥೆ ಹೇಳಲು ತುಂಬ ಅನುಕೂಲ . ಕೇವಲ ಕಥೆಯನ್ನು ಕೇಳುವುದು ಮಾತ್ರವಲ್ಲ ಅಮ್ಮನೊಂದಿಗೆ ಆತ್ಮೀಯ ಕ್ಷಣಗಳನ್ನು ಸವಿಯಲು ಮಕ್ಕಳಿಗೆ ಅನುವು ಮಾಡಿ ಕೊಟ್ಟ೦ತಾಗುತ್ತದೆ.
ಬರಿಯ ದೂರದರ್ಶನವನ್ನೇ ನೋಡುತ್ತ ಅಮ್ಮನ ಮಡಿಲಿನ ಸುಖಕಥೆಗಳಿ೦ದ ಪುಳಕಿತರಾಗಲು ಪುಸ್ತಕವನ್ನು ಪ್ರಕಟಿಸಿ ಎಲ್ಲರಿಗೂ ದೊರೆಯುವಂತೆ ಮಾಡಿದ ಶ್ರೀ ತಾರಾನಾಥ ಬಲ್ಯಾಯರು ನಿಜಕ್ಕೂ ಅಭಿನ೦ದನಾರ್ಹರು . ಈ ಪುಸ್ತಕವು ದಕ್ಷಿಣಕನ್ನಡದ ಬಹುತೇಕ ಎಲ್ಲ ಪುಸ್ತಕದ ಅಂಗಡಿಗಳಲ್ಲೂ ದೊರೆಯುತ್ತದೆ. ಅವಕಾಶವಿದ್ದಲ್ಲಿ ಅವಶ್ಯ ಕೊಂಡು ಓದಿ ಆನಂದಿಸಿ....

Tuesday, May 13, 2008

ಮದ್ದಲೆ ಮಾಂತ್ರಿಕನಿಗೆ ನುಡಿ- ನಮನ ...


ಶಿರಂಕಲ್ಲು ನಾರಾಯಣ ಭಟ್ ನಿಧನ ಎಂಬ ವರ್ತಮಾನ ಯಕ್ಷಗಾನ ಅಭಿಮಾನಿಗಳಿಗೆ ಅತ್ಯಂತ ದು:ಖದ ವಿಚಾರ . ತಾನಾಯಿತು ತನ್ನ ಕೆಲಸವಾಯಿತು ಎಂಬಷ್ಟು ತೀರಾ ಮೃದು ಸ್ವಭಾವದ ನಾರಾಯಣಣ್ಣ ಹಳೆ ತಲೆಮಾರಿನ ಮದ್ದಲೆಗಾರರು . ತೆಂಕು ತಿಟ್ಟಿನ ಹಿರಿಯ ಮಹಾನ್ ಕಲಾವಿದರನ್ನೆಲ್ಲ ಕುಣಿಸಿದ ಇವರು ಅಗರಿ ಭಾಗವತರಿಂದ ಹಿಡಿದು ನಿನ್ನೆ ಮೊನ್ನೆ ಭಾಗವತರಾದವವರ ವರೆಗೆ ಎಲ್ಲರಿಗೂ ಮದ್ದಲೆ ಸಾಥ್ ನೀಡಿದವರು .
ಸುರತ್ಕಲ್ ಮೇಳದಲ್ಲಿ "ಬಪ್ಪನಾಡು ಕ್ಷೇತ್ರ ಮಹಾತ್ಮೆ " ಅಗರಿ ಶ್ರೀನಿವಾಸ ಭಾಗವತರ ಭಾಗವತಿಕೆಯಲ್ಲಿ ಶೇಣಿ -ಜೋಶಿ ಜೋಡಿಯನ್ನು ಕುಣಿಸಿದ
ಇವರು ಹಲವು ದೊಡ್ಡ ಕಲಾವಿದರ ಒಡನಾಟದಿಂದ ಅನುಭವಸಂಪನ್ನರಾಗಿದ್ದರು .
ಇಡೀ ರಾತ್ರೆ ದಣಿವರಿಯದೆ "ತುಳಸಿ ಜಲಂಧರ" ಪ್ರಸಂಗಕ್ಕೆ ಮದ್ದಲೆ ಸಾಥ್ ನೀಡಿದ್ದನ್ನು ೬ ನೆ ತರಗತಿಯಲ್ಲಿರುವಾಗಲೇ ನೋಡಿ ಆನ೦ದಿಸಿದ್ದೇನೆ. ಇವರ ನಿಧನದಿ೦ದ ಯಕ್ಷಗಾನ ಅಭಿಮಾನಿಗಳುಹಳೆಯ ಕೊಂಡಿಯೊಂದನ್ನು ಕಳೆದುಕೊಂಡು ಬಹು ದೊಡ್ಡ ನಷ್ಟವನ್ನು ಅನುಭವಿಸುವಂತಾಯಿತು. ದೇವರು ಅವರಿಗೆ ಸದ್ಗತಿಯನ್ನು ನೀಡಲಿ ಎಂದು ಹೃನ್ಮನಪೂರ್ವಕ ಹಾರೈಸುತ್ತಿದ್ದೇವೆ .

Monday, May 12, 2008

159- ಪುಲಕೇಶಿ ನಗರ (ಪ. ಜಾ.), ಮತಗಟ್ಟೆ ಸ೦ಖ್ಯೆ - 39A


ಈ ಸಲ ಚುನಾವಣಾ ಕಾರ್ಯಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರದೇಶಕ್ಕೆ ತೆರಳಬೇಕೆಂದು ಮುಖ್ಯ ಚುನಾವಣಾಧಿಕಾರಿಯವರ ಆದೇಶ ಬಂದಾಗ ನಿಜಕ್ಕೂ ಸಮಾಧಾನದ ಉಸಿರು ಬಿಟ್ಟಿದ್ದೆ. ಯಾಕೆಂದರೆ ಕೊನೆ ಪಕ್ಷ ಮಹಾನಗರಕ್ಕೆ ಹೋಗುವುದು ; ಅಲ್ಲಿನ ಶಾಲೆಗಳು ತಕ್ಕ ಮಟ್ಟಿಗೆ ಉತ್ತಮವಾಗಿರುತ್ತದೆ ಎಂಬ ಕಲ್ಪನೆ (!) ಮನದಲ್ಲಿತ್ತು. ನಾಗರಿಕ ಜನ ಮೇಲಾಗಿ ವಿದ್ಯಾವಂತರು ಇರುವುದರಿಂದ ನಮ್ಮ ಕರ್ತವ್ಯ ಪಾಲನೆ ಮಾಡಲು ಅನುಕೂಲವಾಗುತ್ತದೆ ಎಂದು ಯೋಚಿಸುತ್ತಾ ಮಹಾನಗರ ಪಾಲಿಕೆ ಸರಕಾರೀ ಪದವಿ ಪೂರ್ವ ಕಾಲೇಜು , ಪುಲಕೇಶಿ ನಗರ , ಪ್ರೇಝರ ಟೌನ್ ಸೇರಿದೆ .ನನ್ನಂತೆ ಹಲವು ಮಂದಿ "ಮತಿಗೆಟ್ಟ ಅಧಿಕಾರಿಗಳು " ಅಲ್ಲಲ್ಲ ... ಮತಗಟ್ಟೆ ಅಧಿಕಾರಿಗಳು !! ಅಲ್ಲಿ ಸೇರಿದ್ದರು .
ಈ ಸಲ ನನಗೆ ದೊರೆತದ್ದು ಪುಲಕೇಶಿ ನಗರ ಮೀಸಲು ಕ್ಷೇತ್ರ .ನಾನು ತೆರಳಿದವನೇ ನನ್ನ ಗುಂಪಿನ ಸದಸ್ಯರೆಲ್ಲರೂ ಒಂದೆಡೆ ಸೇರಿರುವಲ್ಲಿ ಹೋಗಿ ಅವರೊಂದಿಗೆ ಚುನಾವಣೆಗೆ ಬೇಕಾದ ಮತಯಂತ್ರ , ಇತರ ಪರಿಕರಗಳನ್ನು ಪಡೆಯಲು ಸಾಲಿನಲ್ಲಿ ನಿಂತೆ .
"159- ಪುಲಕೇಶಿ ನಗರ (ಪ. ಜಾ.), ಮತಗಟ್ಟೆ ಸ೦ಖ್ಯೆ - 39A" ಸುಬ್ರಹ್ಮಣ್ಯ ಭಟ್ ಎಂದು ಜೋರಾಗಿ ಮೈಕನಲ್ಲಿ ಘೋಷಿಸಿದಾಗ ಪರಿಕರಗಳನ್ನು ಪಡೆಯಲು ಧಾವಿಸಿದೆ . ಮತಯನ್ತ್ರದ ವಿಳಾಸ ಮುದ್ರಿಕೆಯನ್ನು ನೋಡಿ ನನಗೆ ವಹಿಸಲಾದ ಮತಗಟ್ಟೆ ಯಾವುದಿರಬಹುದು ? ಎಂಬ ಸಹಜ ಕುತೂಹಲದಿಂದ ನೋಡಿದಾಗ " ಅಮರ್ ಸ್ಕೂಲ್ ", ಅಯೋಧ್ಯಾದಾಸ್ ನಗರ್ , ಮಾಲಿಕ ಸಾಬ್ ರೋಡ್ " ಎಂದು ನಮೂದಗಿದ್ದು ನನಗೆ ಸ್ವಲ್ಪ ಸಮಾಧಾನವಾಯಿತು . ಯಾವುದೊ ಕ್ರಿಸ್ಚನ್ನರ ಶಾಲೆ ಇರಬೇಕು . ಅದು ಅಯೋಧ್ಯಾದಾಸ ನಗರದಲ್ಲಿದೆ . ಒಳ್ಳೆ ಏರಿಯಾವೇ ಇರಬಹುದೆಂದು ತರ್ಕಿಸಿಕೊಂಡು ನನ್ನ ಗುಂಪಿನವರೊಂದಿಗೆ ಮಿನಿ ಬಸ್ ಏರಿ ಕುಳಿತೆ .
ಬಸ್ ಮತಗಟ್ಟೆ ಇರುವ ಪ್ರದೇಶವನ್ನು ತಲುಪಿದಾಗಲೇ ನನಗೆ ತಿಳಿದದ್ದು ನಾನು ಬಂದದ್ದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರದೇಶಕ್ಕೆ ಸೇರಿದ " ಅನಾಗರಿಕ ಸ್ಥಳಕ್ಕೆ " ನಾನು ತಲುಪಿದೆ ಎಂದು !!
"ಅಮ್ಮಾರ್ ಸ್ಕೂಲ್ " ಎಂಬುದು ಬರವಣಿಗೆ ದೋಷದಿಂದ "ಅಮರ್ ಸ್ಕೂಲ್ " ಎಂದು ವಿಳಾಸ ಪತ್ರದಲ್ಲಿ ನಮೂದಾಗಿತ್ತು !!
ಆ ಪ್ರದೇಶ ಈ ರೀತಿ ಇರಬಹುದೆಂಬ ಕಲ್ಪನೆ ನನಗೆ ಕನಸಿನಲ್ಲಿಯೂ ಇರಲಿಲ್ಲ !! ಎಲ್ಲಿ ನೋಡಿದರಲ್ಲಿ ಮಟನ್ ಅಂಗಡಿಗಳು , ಮುಸ್ಲಿಮರ ಮನೆಗಳನ್ನು ಬಿಟ್ಟು ಒಂದೇ ಒಂದು ಮನೆ ಕಣ್ಣಿಗೂ ಕಾಣಿಸುತ್ತಿರಲಿಲ್ಲ ! ತೆರೆದ ಚರಂಡಿ ತುಂಬಾ ರಕ್ತ , ಹಂದಿಗಳ ಕೇಕೆ
ಭಯಂಕರ ವಾಸನೆ . ರಾಜಧಾನಿಯಾದ ಬೆಂಗಳೂರಿನಲ್ಲಿ ಅದೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರದೇಶಕ್ಕೆ ಒಳಪಟ್ಟ ಜಾಗದಲ್ಲಿ ನಾನು ನಿಂತಿದ್ದೆನೆಯೇ ? ಎಂದು ಸಂದೇಹ ಹುಟ್ಟಿಸುವ ಅಲ್ಲಿ ಇರುವ ಜನರ ಜೀವನ ಶೈಲಿ ನೋಡಿದಾಗ ಇವರೂ ನಾಗರಿಕರೆ ?? ಪ್ರಶ್ನಿಸುವಂತಿತ್ತು .
ಒಬ್ಬ ಸಾತ್ವಿಕ ಮನುಷ್ಯ ಒಂದು ಕ್ಷಣಕ್ಕೂ ನಿಲ್ಲಲು ಸಾಧ್ಯವಾಗದ ಆ ಸ್ಥಳದಲ್ಲಿ ಒಂದು ಇಡೀ ದಿನ ಚುನಾವಣಾ ಕಾರ್ಯ ಹೇಗೆ ಯಶಸ್ವಿಯಾಗಿ ಪೂರೈಸಿ ಜೀವಂತ ಮರಳಿ ನನ್ನ ಸ್ವಸ್ಥಾನ ಸೇರಿದೆ ಎಂಬುದು ಇನ್ನು ಸೋಜಿಗದ ಸಂಗತಿಯೇ !!
ಅಲ್ಪ ಸಂಖ್ಯಾತರೆಂದು ಹೇಳಿಕೊಂಡು ಶಾಲೆಗೆ ಪರವಾನಿಗೆ ಗಿಟ್ಟಿಸಿಕೊಂಡು ಕೋಳಿ ಗೂಡಿನಂಥ (ನಮ್ಮ ಊರ ಕಡೆ ಅಡಿಕೆ ಒಣಗಿಸುವ ಗೊದಾಮಿನಂತಿರುವ ) ಕಟ್ಟಡದಲ್ಲಿ ಕಿರಿಯ ಪ್ರಾಥಮಿಕ ಶಾಲೆ ಎಂದು ರಾಜಧಾನಿಯಲ್ಲೇ ರಾಜಾರೋಷವಾಗಿ ಇವರು ನಡೆಸುತ್ತಿರುವ ಉದ್ಯಮ ನೋಡಿದರೆ ಯಾರೇ ಆದರೂ ಬೆಚ್ಚಿ ಬೀಳುವನ್ತಿದ್ದ ಆ ಕಟ್ಟಡದಲ್ಲಿ ಬಹಳ ಸಂಕಟಪಟ್ಟುಕೊ೦ಡು ಮತಗಟ್ಟೆ ಸ್ಥಾಪಿಸಿಕೊಂಡು ಕುಳಿತೆವು . ರಾತ್ರೆ ಊಟವಿಲ್ಲ ; ಕುಡಿಯಲು ಒಳ್ಳೆ ನೀರಿಲ್ಲ . ಜೊತೆಯಲ್ಲಿ ತಂದಿದ್ದ ನೀರೆಲ್ಲ ಖಾಲಿಯಾಗಿ ಹೋಗಿತ್ತು . ಮನ ಮುದುಡಿ ಹೋಗಿದ್ದರೂ ಕರ್ತವ್ಯ ಪಾಲಿಸದೇ ವಿಧಿ ಇಲ್ಲ .
ಮರುದಿನ ಬೆಳಗ್ಗೆ ೬ ಗಂಟೆಗೆ ಸರಿಯಾಗಿ ಅಣಕು ಮತದಾನ ಮಾಡಿ ತೋರಿಸಿ ೭ಕ್ಕೆ ಸರಿಯಾಗಿ ಮತದಾನಕ್ಕೆ ಅನುವು ಮಾಡಿ ಕೊಟ್ಟೆವು . 1042 ಮತದಾರರಿದ್ದ ಅಲ್ಲಿ ಶೇ. ೯೦ ಮುಸ್ಲಿಂ ಮತದಾರರೂ ; ಅಲ್ಪಸಂಖ್ಯಾತ ಹಿಂದೂ ಮತದಾರರೂ ಮತದಾನ ಮಾಡಿದ್ದರು. ೧೧.೪೦ ರ ಸುಮಾರಿಗೆ ಯುವಕರ ಗುಂಪೊಂದು ಗಲಭೆ ಎಬ್ಬಿಸುವ ಪ್ರಯತ್ನ ಮಾಡಿದಾಗ ತಕ್ಷಣ ಪೊಲೀಸರಿಗೆ ಸುದ್ದಿ ತಲುಪಿಸಿದಾಗ ೧೦ ನಿಮಿಶದೊಳಗಾಗಿ BSF ತಂಡ ಸ್ಥಳಕ್ಕೆ ಬಂದು ಲಘು ಲಾಠಿ ಪ್ರಹಾರ ನಡೆಸಿ ವಾತಾವರಣ ತಿಳಿಗೊಳಿಸಿದರು . ಸಂಜೆ ೫ಕ್ಕೆ ಮತದಾನ ಮುಕ್ತಾಯಗೊಳಿಸಿ " ಗೂಡಿನಿಂದ ಬಿಟ್ಟ ಮಂಗನಂತೆ " ಬದುಕಿದೆಯಾ ಬಡ ಜೀವವೇ ಎಂದು ಚುನಾವಣಾ ಸಾಮಾಗ್ರಿ ವಿತರಣಾ ಕೇಂದ್ರ ಕ್ಕೆ ಮರಳಿ ಎಲ್ಲವನ್ನು ಹಿಂದಿರುಗಿಸಿ ಸ್ವೀಕೃತಿ ರಶೀದಿ ಪಡೆದು ನಮ್ಮ ನಮ್ಮ ಮನೆ ಕಡೆ ತೆರಳಿದೆವು .
ಅನ್ನ ನೀರು ಸಿಗದ ಆ ತಾಣಕ್ಕೆ ಸಕಾಲದಲ್ಲಿ ನಮಗೆ ಮತದಾನದ ದಿನ ಊಟವನ್ನು ಸಪತ್ನೀಕರಾಗಿ ಬಂದು ಒದಗಿಸಿದ ಚೆಮ್ಬಾರ್ಪು ಮುರಳಿ ಮನೋಹರ (ಮುರಳಿ ಭಾವ) ರ ಉಪಕಾರವನ್ನು ಮರೆಯಲು ಸಾಧ್ಯವೇ ಇಲ್ಲ . ಮೇಲೆ ವರ್ಣಿಸಿದ ಸ್ಥಳಕ್ಕೆ ಅವರು ತಲುಪಿದ ; ಅಲ್ಲಿನ ಪ್ರತ್ಯಕ್ಷ ಅನುಭವ ಅವರ ಮಾತಲ್ಲೇ ಕೇಳುವುದು ಸೂಕ್ತ !

ಇದು ನನ್ನ ೩ ನೆ ಚುನಾವಣಾ ಕರ್ತವ್ಯ . ಮೂರು ಬಾರಿಯೂ ವಿವಿಧ ಅನುಭವ ನೀಡಿದ ಚುನಾವಣಾ ಆಯೋಗಕ್ಕೆ ನಾನು ಅಭಾರಿ.

Monday, May 5, 2008

ಮುದ ನೀಡುವ ಕಿರುಗವನಗಳು...

ಇದು ನಮಗೆ ೮ನೇ ತರಗತಿಯ ಪಾಠ ಪುಸ್ತಕದಲ್ಲಿತ್ತು . ಕಡೆಂಗೋಡ್ಲು ಶ೦ಕರ ಭಟ್ ಬರೆದದ್ದೆಂದು ನೆನಪು ..

-1-


ಕತ್ತೆಯು ಎಂದಾದರೂ ನಿನ್ನನ್ನು ಒದ್ದರೆ
ಮರಳಿ ನೀನೊದೆಯದಿರದಕೆ
ಕತ್ತೆಯ ಒದೆಯನು ಹಿಂದಿರುಗಿಸಿದರೆ
ನೋವಿನ ಬಹು ಪಾಲು ನಿನಗೆ .

-2-

ಹತ್ತೆಡೆಯೊಳು ತೋಡಿ ಒಂದಡಿಯಷ್ಟನು
ಬರಲಿಲ್ಲ ನೀರೆನ್ನಬೇಡ
ಒಂದೆಡೆಯೊಳು ತೋಡು ಹತ್ತಡಿಯಷ್ಟನು
ಚಿಮ್ಮುವುದುದಕವು ನೋಡ !


***