ಬೇಸಿಗೆಯಲ್ಲಿ ಪ್ರತಿ ವರ್ಷವೂ ನಮ್ಮ
ಗುಡ್ಡದಿಂದ ಗೇರುಬೀಜಗಳು (ಗೋಡಂಬಿ) ನಾಪತ್ತೆಯಾಗುತ್ತಿದ್ದವು. ಸ್ಥಳೀಯ ಮರಿ ಕಳ್ಳರು
ರಜಾ ಸಮಯದಲ್ಲಿ ಗೇರುಬೀಜ ಕದಿಯುತ್ತಿದ್ದು ಅವರಿಗೂ ಕಿಸೆ ಖರ್ಚಿಗೆ ಪುಡಿಗಾಸು ಆದಾಯ
ಬರುತ್ತಿತ್ತು... ಆದರೆ ಈ ಸಲ ಗುಡ್ಡೆಗೆ ಹೋಗಿ ಮರದ ಕೆಳಗೆ ನೋಡಿದರೆ ಒಂದು ಬೀಜವೂ ಮಾಯವಾಗಿಲ್ಲ !! ಎಲ್ಲ ಬೀಜಗಳೂ ಮರದ
ಬುಡದಲ್ಲೇ ಇವೆ..!!! ಏನಿದಾಶ್ಚರ್ಯ??!!! ಯಾಕೆ ಹೀಗೆ ?????!!!! why?? why?? why??!!!
ಇದಕ್ಕೆ ಕಾರಣ ಹುಡುಕಿದಾಗ ಸಿಕ್ಕ ಉತ್ತರ
ಕಾಂಗ್ರೇಸ್ ಪಕ್ಷ ಪರ ಪ್ರಚಾರಕ್ಕೆ ಹೋದರೆ ಊಟ ತಿಂಡಿ ಸಹಿತ ರೂ750/- + ಒಂದು ಬಾಟ್ಲಿ, ಬಿಜೆಪಿ ಪರ ಹೋದರೆ ಊಟ ತಿಂಡಿ ಸಹಿತ ರೂ650/- , ಜೆಡಿಯಸ್ ಪರ ಹೋದರೆ ಊಟ ತಿಂಡಿ ಸಹಿತ ರೂ450/- ಸಿಗುತ್ತದೆ.!!!!
ಬೆಳಗ್ಗಿಂದ ಸಂಜೆವರೆಗೆ ಮನೆಯಿಂದ ಮನೆಗೆ ಕರಪತ್ರ ತಲುಪಿಸಿದರೆ ಮುಗಿಯಿತು. ಹೇಗೂ ಬೇಸಿಗೆ ರಜೆ...ಹಳ್ಳಿಗಳಲ್ಲಿ ಹೋದ ಮನೆಗಳಲ್ಲಿ ಕುಡಿಯುದಕ್ಕೆ ಮಜ್ಜಿಗೆ/ ನೀರು ತಿನ್ನಲು ಮಾವಿನ ಹಣ್ಣು, ಪೇರಳೆ, ಜಂಬುನೇರಳೆ ಯಾವುದಾದರೊಂದು ಹಣ್ಣು ಸಿಕ್ಕೇ ಸಿಗುತ್ತದೆ!
ಇಡೀ ದಿನ ಗೇರುಬೀಜ ಕದ್ದರೂ ದಿನಕ್ಕೆ ಎರಡರಿಂದ ಮೂರು ಕಿಲೋ ಮಾತ್ರ ಸಿಗುವುದು.. ಒಂದು ಕಿಲೋ ಬೀಜಕ್ಕೆ ಕೇವಲ 80/- ಒಟ್ಟಿನಲ್ಲಿ ದಿನದ ಆದಾಯ ಕೇವಲ 200-300 ಮಾತ್ರ ! ಇನ್ನು ಕದಿಯುವಾಗ ಯಾರ ಕೈಗೂ ಸಿಕ್ಕಿ ಬೀಳಕೂಡದು ! ( ಆಡಿ ತಪ್ಪಲುಬಹುದೇ... ಓಡಿ ಸಿಕ್ಕಲುಬಹುದೇ...?? ) ಅದಕ್ಕೇ.......
ಇನ್ನು ಯಾರಿಗೆ ಬೇಕ್ರೀ ನಿಮ್ಮ ಬೀಜ....????!!!
ಇದಕ್ಕೆ ಕಾರಣ ಹುಡುಕಿದಾಗ ಸಿಕ್ಕ ಉತ್ತರ
ಕಾಂಗ್ರೇಸ್ ಪಕ್ಷ ಪರ ಪ್ರಚಾರಕ್ಕೆ ಹೋದರೆ ಊಟ ತಿಂಡಿ ಸಹಿತ ರೂ750/- + ಒಂದು ಬಾಟ್ಲಿ, ಬಿಜೆಪಿ ಪರ ಹೋದರೆ ಊಟ ತಿಂಡಿ ಸಹಿತ ರೂ650/- , ಜೆಡಿಯಸ್ ಪರ ಹೋದರೆ ಊಟ ತಿಂಡಿ ಸಹಿತ ರೂ450/- ಸಿಗುತ್ತದೆ.!!!!
ಬೆಳಗ್ಗಿಂದ ಸಂಜೆವರೆಗೆ ಮನೆಯಿಂದ ಮನೆಗೆ ಕರಪತ್ರ ತಲುಪಿಸಿದರೆ ಮುಗಿಯಿತು. ಹೇಗೂ ಬೇಸಿಗೆ ರಜೆ...ಹಳ್ಳಿಗಳಲ್ಲಿ ಹೋದ ಮನೆಗಳಲ್ಲಿ ಕುಡಿಯುದಕ್ಕೆ ಮಜ್ಜಿಗೆ/ ನೀರು ತಿನ್ನಲು ಮಾವಿನ ಹಣ್ಣು, ಪೇರಳೆ, ಜಂಬುನೇರಳೆ ಯಾವುದಾದರೊಂದು ಹಣ್ಣು ಸಿಕ್ಕೇ ಸಿಗುತ್ತದೆ!
ಇಡೀ ದಿನ ಗೇರುಬೀಜ ಕದ್ದರೂ ದಿನಕ್ಕೆ ಎರಡರಿಂದ ಮೂರು ಕಿಲೋ ಮಾತ್ರ ಸಿಗುವುದು.. ಒಂದು ಕಿಲೋ ಬೀಜಕ್ಕೆ ಕೇವಲ 80/- ಒಟ್ಟಿನಲ್ಲಿ ದಿನದ ಆದಾಯ ಕೇವಲ 200-300 ಮಾತ್ರ ! ಇನ್ನು ಕದಿಯುವಾಗ ಯಾರ ಕೈಗೂ ಸಿಕ್ಕಿ ಬೀಳಕೂಡದು ! ( ಆಡಿ ತಪ್ಪಲುಬಹುದೇ... ಓಡಿ ಸಿಕ್ಕಲುಬಹುದೇ...?? ) ಅದಕ್ಕೇ.......
ಇನ್ನು ಯಾರಿಗೆ ಬೇಕ್ರೀ ನಿಮ್ಮ ಬೀಜ....????!!!