Monday, May 5, 2008

ಮುದ ನೀಡುವ ಕಿರುಗವನಗಳು...

ಇದು ನಮಗೆ ೮ನೇ ತರಗತಿಯ ಪಾಠ ಪುಸ್ತಕದಲ್ಲಿತ್ತು . ಕಡೆಂಗೋಡ್ಲು ಶ೦ಕರ ಭಟ್ ಬರೆದದ್ದೆಂದು ನೆನಪು ..

-1-


ಕತ್ತೆಯು ಎಂದಾದರೂ ನಿನ್ನನ್ನು ಒದ್ದರೆ
ಮರಳಿ ನೀನೊದೆಯದಿರದಕೆ
ಕತ್ತೆಯ ಒದೆಯನು ಹಿಂದಿರುಗಿಸಿದರೆ
ನೋವಿನ ಬಹು ಪಾಲು ನಿನಗೆ .

-2-

ಹತ್ತೆಡೆಯೊಳು ತೋಡಿ ಒಂದಡಿಯಷ್ಟನು
ಬರಲಿಲ್ಲ ನೀರೆನ್ನಬೇಡ
ಒಂದೆಡೆಯೊಳು ತೋಡು ಹತ್ತಡಿಯಷ್ಟನು
ಚಿಮ್ಮುವುದುದಕವು ನೋಡ !


***



No comments: