Monday, March 17, 2008

ಸಂಪಾಜೆ........

ಸಂಪಾಜೆ .... ಎಂದರೆ ಯಕ್ಷ ಪ್ರಿಯರಿಗೆ ಮೊದಲು ನೆನಪಾಗುವುದೇ ಶೀನಪ್ಪ ರೈ ಯವರು !





ಯಕ್ಷಗಾನ ಅಭಿಮಾನಿಗಳ ಹೃದಯದಲ್ಲಿ ವಿಶಿಷ್ಠ ಸ್ಥಾನ ಪಡೆದ ಸಜ್ಜನ ಕಲಾವಿದ ಶೀನಪ್ಪಣ್ಣ. ಪ್ರತಿಯೊ೦ದು ಪಾತ್ರದ ಬಗ್ಗೆ ಸ್ಪಷ್ಟ ಕಲ್ಪನೆಯುಳ್ಳ ಇವರ ವೇಷವನ್ನು ರಂಗದಲ್ಲಿ ನೋಡುವುದೇ ಚಂದ. ಮಾಡುವ ಕೆಲಸದ ಬಗ್ಗೆ ಅವರಿಗಿರುವ ಪ್ರೀತಿ ಅನನ್ಯ . ಶಿಸ್ತುಬದ್ಧ ಕುಣಿತ , ಅಭಿನಯ, ಸಮಯೋಚಿತ ಮಾತು ,ರ೦ಗವನ್ನು ತುಂಬುವ ಕ್ರಮ ಹಾಗೂ ದಣಿವರಿಯದ ಉತ್ಸಾಹದಿಂದ ಯಕ್ಷಗಾನ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದವರು ಇವರು . ಪ್ರೇಕ್ಷರ ಸಂಖ್ಯೆಗನುಗುಣವಾಗಿ " ಪಾತ್ರ " ನಿರ್ವಹಣೆ ಮಾಡುವ ಎಷ್ಟೋ ಕಲಾವಿದರನ್ನು ನಾವು ಆಗಾಗ ಕಾಣುತ್ತೇವೆ . ಆದರೆ ಶೀನಪ್ಪಣ್ಣ ಇದಕ್ಕೆ ಅಪವಾದ. ಜನರಿರಲಿ ಇಲ್ಲದೆ ಇರಲಿ ಇವರ ಪಾತ್ರ ರಂಗದಲ್ಲಿ ಒಂದೇ ತೆರನಾಗಿ ವಿಜ್ರಂಬಿಸುತ್ತಿರುತ್ತದೆ. ಇವರ ಹಿರಣ್ಯಾಕ್ಷ , ಇಂಧ್ರಜಿತು, ರಕ್ತಬೀಜ, ಜಾಂಬವಂತ, ಅರ್ಜುನ , ಕಾರ್ತವೀರ್ಯ, ಶಿಶುಪಾಲ ಮೊದಲಾದ ಪಾತ್ರಗಳು ಇವರಿಗೆ ಪ್ರಸಿದ್ದಿಯನ್ನು ತಂದು ಕೊಟ್ಟಿದೆ .







ಏನ ಮಾಡುವದಿನ್ನು .......

ಇಂಧ್ರಜಿತು








ಶಿಶುಪಾಲ (ಏಣಿ ನಾಮ : ಒಂದು ವಿಶಿಷ್ಠ ಮುಖವರ್ಣಿಕೆ)
ಮುಖವರ್ಣಿಕೆ ಕಮ್ಮಟಗಳಿಗೆ ಇವರು ಅತೀ ಅವಶ್ಯ ಸ೦ಪನ್ಮೂಲ ವ್ಯಕ್ತಿ. ಇಳಿ ವಯಸ್ಸಿನಲ್ಲೂ ಇವರ ದಣಿವರಿಯದ ಅದ್ಭುತ ಅಭಿನಯ ಎಲ್ಲರನ್ನು ಬೆರಗುಗೊಳಿಸುವ೦ತದ್ದು !
ಸದಾ ಸ್ನೇಹಶೀಲರಾಗಿರುವ ಇವರು ಇನ್ನಷ್ಟು ಕಾಲ ಯಕ್ಷರಸಿಕರ ಮನಸ್ಸನ್ನು ರಂಜಿಸಲಿ ಎಂದು ತುಂಬು ಮನಸ್ಸಿನಿಂದ ಹಾರೈಸುತ್ತೇವೆ.
***

No comments: