Saturday, April 5, 2008

ಬ್ಯಾನರ್ ಬಾಬಣ್ಣ ....

ಮೊನ್ನೆ ತಾಳಮದ್ದಲೆಯೊಂದರಲ್ಲಿ ಶ್ರುತಿ ಹಿಡಿದಿದ್ದ ಬಾಬಣ್ಣನನ್ನು ಕಂಡಾಗ ನನಗೆ ಆಶ್ಚರ್ಯವಾಯಿತು . ಒಂದು ದಿನವು ಬಿಡುವಿಲ್ಲದೆ ಸದಾ ಬ್ಯಾನರ್ ಬರೆಯುತಿದ್ದ ಬಾಬಣ್ಣ ಇವರೆಯಾ ? ಕುರುಚಲು ಗಡ್ಡ , ಕಂದಿಹೋದ ಕಣ್ಣು , ಪೇಲವ ಮುಖವನ್ನು ಹೊಂದಿದ್ದ ಅವರನ್ನು ನಿಜಕ್ಕೂ ನಾನು ಅಲ್ಲಿ ನಿರೀಕ್ಷಿಸಿರಲಿಲ್ಲ !
ಯಾವುದೇ ಸಭೆ ಸಮಾರಂಭಗಳಿಗೆ ಹೋದರು ಕೂಡಲೇ ಅಲ್ಲಿ ಮನ ಸೆಳೆಯುವುದು ಬಾಬಣ್ಣನ ಬ್ಯಾನರ್ ! ಕಾರ್ಯಕ್ರಮಕ್ಕೆ ಕಳೆ ನೀಡುತ್ತಿದ್ದ ಅವರ ವಿವಿಧ ಶೈಲಿಯ ಬರಹಗಳನ್ನೋಳಗೊಂಡ ಬ್ಯಾನರ್ ಗಳಿಗೆ ಬಹಳ ಬೇಡಿಕೆ . ಚುನಾವಣೆ ಬಂತೆಂದರೆ ಸಾಕು ನಮ್ಮ ಬಾಬಣ್ಣನಿಗೆ ತಲೆ ಕೆರೆದುಕೊಳ್ಳುಲೂ ಪುರುಸೋತ್ತಿರದಷ್ಟು ಕೆಲಸ . ಎಷ್ಟೇ ಒತ್ತದವಿದ್ದರೂ ಸಮಯಕ್ಕೆ ಸರಿಯಾಗಿ ಬಾಬಣ್ಣನ ಬ್ಯಾನರ್ ರೆಡಿ ! ಸ್ವಂತಕ್ಕೆ ಹೇಳಿಕೊಳ್ಳುವವರಾರೂ ಬಾಬಣ್ಣನಿಗೆ ಇಲ್ಲ. ಮೊದ ಮೊದಲು ಮಹಾಲಿ೦ಗೇಶ್ವರ ದೇವಸ್ಥಾನ ದ ಬಡಗು ಗೋಪುರದಲ್ಲಿ ಮಲಗುತ್ತಿದ್ದ ಅವರಲ್ಲಿ ಒಂದು ಪೆಟ್ಟಿಗೆ ತುಂಬ ಬಣ್ಣ , ಬ್ರಶ್ ಇತ್ಯಾದಿ ಪರಿಕರ ಇತ್ತು. ಯಕ್ಷಗಾನದಲ್ಲಿ ಬಣ್ಣದ ವೇಷ ಮಾಡುತ್ತಿದ್ದುದರಿಂದ ನಮಗೆಲ್ಲ ಬಾಬಣ್ಣ ಚಿರಪರಿಚಿತ ವ್ಯಕ್ತಿ . ಅವರ ವೇಷ ನೋಡಲು ಭಯಾನಕ ವಾಗಿರುತ್ತಿತ್ತು.

" ದಾನೆ ಬಾಬಣ್ಣ ಎಂಚ ಉಲ್ಲರ್ ? "

"ಮಿತ್ತ್ ಪೋಪುನ ಏಪ ಅಂದ್ ಲೆಕ್ಕ ಪಾದೊಂದುಲ್ಲೇ "
"ಅಂಚಲಾ ಇತ್ತೆ ದಾದ ಅಂಡ್ ?" ಕುತೂಹಲ ತಡೆಯದೆ ಕೇಳಿಯೇ ಬಿಟ್ಟೆ .
ನಾನಾ ದಾನೆ ಅವರ ಬಾಕಿ ಸ್ವಾಮೀ ? ೫ ಪ್ಲೆಕ್ಷ್ ಅಂಗಡಿ ಈ ಊರುದ್ ಆಯಿಬುಕ್ಕ ನನ್ ದಾನೆ ಆವೋದು ?

ತಲೆಗೆ ಹೊಡೆದ ಹಾಗೆ ಆಯಿತು .
ಅರ್ಧ ತಾಸಿನ ಒಳಗೆ ಕಂಪ್ಯೂಟರ್ ನಲ್ಲಿ ಪ್ಲೆಕ್ಷ್ ಬ್ಯಾನರ್ ತಯಾರಾಗುವಾಗ ದಿನವಿಡೀ ಯಾರು ಕಾಯುತ್ತಾರೆ ?

ಬಾಬಣ್ಣ ನ ಹಾಗೆ ಹಲವು ಮಂದಿ ಮೂಲೆ ಗುಂಪಾಗಿ ಹೋಗುತ್ತಿದ್ದಾರೆ . ಹೊಟ್ಟೆ ಪಾಡಿಗೆ ಬೇರೆ ಕೆಲಸವನ್ನದರೂ ಮಾಡಲು ಕೆಲಸ ಸಿಗುತ್ತಿಲ್ಲ . ಜಾಗತೀಕರಣ ಇಂದು ಜನರನ್ನು " ವಿಶ್ವ ಮಾನವ " ನನ್ನಾಗಿಸುತ್ತಿದೆ .
ಬೇಕಿತ್ತೆ ಈ ಕಂಪ್ಯೂಟರ್ ?
ಬಡವನ ಸಮಾಧಿಯ ಮೇಲೆ ಕುಳಿತು ಹೋಳಿಗೆ ತಿನ್ನುತ್ತಾ " ತುಪ್ಪ ರಜ್ಜ ವಾಸನೆ ಬತ್ತೋ ಬಾವಯ್ಯ ? " ಅಂತ ಕೇಳುವ ಹಾಗೆ ಆಯ್ತಲ್ಲಾ ?
ಎಲ್ಲ ಗುಡಿ ಕೈಗಾರಿಕೆಗಲೂ ಪರಮಾತ್ಮನ ಅಡಿ ಸೇರುತ್ತಿದೆ .
ಏನು ಮಾಡಲಿ ಎಂದು ಯೋಚಿಸುತ್ತಿರುವಾಗಲೇ ಬಲಿಪಜ್ಜ ತೆಗೆದ ಪದ್ಯ
" ಹರನೆ ಶಂಕರನೇ ಮುಂದೆನ್ ಗೈಯಲಿ ........."