Thursday, March 6, 2008

ವೇದಮೂರ್ತಿ ಸತ್ಯೇಶ್ವರ ಭಟ್ಟರು....



ಪೆರಡಾಲ ಉದನೇಶ್ವರ ದೇವಸ್ಥಾನದಲ್ಲಿ ವಸಂತ ವೇದ ಪಾಠ ಶಾಲೆಯನ್ನು ಶ್ರೀ ನವಕಾನ ಶಂಕರನಾರಾಯಣ ಭಟ್ಟರು ಹುಟ್ಟು ಹಾಕಿ ಇಂದಿಗೆ ೫ ದಶಕಗಳೇ ಸಂದವು . ಉಪನೀತರಾದ ಮಕ್ಕಳನ್ನು ವೇದ ಪಾಠ ಕಲಿಯಲು ಇಲ್ಲಿಗೆ ಕಳಿಸುವುದು ಹವ್ಯಕ ಸಮುದಾಯದವರ ಪರಿಪಾಠ. ಇಲ್ಲಿನ ಮುಖ್ಯ ಗುರುಗಳೇ ವೇದಮೂರ್ತಿ ಶ್ರೀ ಸತ್ಯೇಶ್ವರ ಭಟ್ಟರು. ಕಿಳಿಂಗಾರು ವೈದಿಕ ಮನೆತನದಲ್ಲಿ ಜನಿಸಿದ ಇವರು ಸರಳ, ಸಜ್ಜನ ಹಾಗೂ ಸಂಪ್ರದಾಯಸ್ಥ ವೈದಿಕರು.ಭಟ್ಟರು ಹಲವು ಮಂದಿ ಶಿಷ್ಯ ವರ್ಗಕ್ಕೆ ಆಪ್ತರೂ ಹೌದು. ಕಳೆದ ಹಲವಾರು ವರ್ಷಗಳಿಂದ ಗುರುಗಳಾಗಿ ಸೇವೆ ಸಲ್ಲಿಸುತ್ತಾಬಂದಿರುವ ಇವರು ವೇದಾಭ್ಯಾಸದ ಪ್ರಾಥಮಿಕ ಪಾಠಗಳನ್ನು ಕ್ರಮಬದ್ಧವಾಗಿ ಕಲಿಸುವುದರಲ್ಲಿ ನಿಷ್ಣಾತರು.

ಪೆರಡಾಲ ಉದನೇಶ್ವರ ದೇವರ ಸನ್ನಿಧಿ ಎಂಬುದು ನಿಸರ್ಗ ಸೊಬಗಿನ ತಾಣ . ಇಲ್ಲಿ ವೇದ ಪಾಠ ಕಲಿಯುವುದೆಂದರೆ ಎಲ್ಲ ಮಕ್ಕಳಿಗೂ ಎಲ್ಲಿಲ್ಲದ ಉತ್ಸಾಹ . ಶ್ರೀ ಸತ್ಯೇಶ್ವರ ಭಟ್ಟರು ಒಂದನೇ ತರಗತಿಗೆ ಸಂಧ್ಯಾವಂದನೆ , ಸೂಕ್ತಗಳು, ಅಗ್ನಿ ಕಾರ್ಯ , ಮುಂತಾದ ಪಾಠಗಳನ್ನು ಸ್ವರಯುಕ್ತವಾಗಿ ಕಲಿಸುತ್ತಾರೆ. ಮಂತ್ರಗಳನ್ನು ಹೇಳುವಾಗ ತಪ್ಪಿದರೆ " ಸರಿ ಹೇಳೋ˘ ಮಜಡ" ಎ೦ದು ಗದರಿಸಿ ಮಕ್ಕಳನ್ನು ಸರಿ ದಾರಿಗೆ ತರುವ ಕ್ರಮ ನಿಜಕ್ಕೂ ಅನನ್ಯ .


ಪೆರಡಾಲದಲ್ಲಿ ವೇದ ಪಾಠ ಕಲಿತ ಎಲ್ಲ ಮಕ್ಕಳ ಮನಸ್ಸಿನ ಮೇಲೆ ಗಾಢವಾದ ಪ್ರಭಾವ ಬೀರಿದವರೆಂದರೆ ಶ್ರೀ ಸತ್ಯೇಶ್ವರ ಭಟ್ಟರು . ಅವರ ಕಲಿಸುವ ಕ್ರಮವನ್ನು ಮಕ್ಕಳು ಅನುಕರಿಸುವುದು ನೋಡಲು ತು೦ಬಾ ಮಜವಾಗಿರುತ್ತದೆ !
ಸದಾ ಸ್ಪೂರ್ತಿಯ ಸೆಲೆಯಾಗಿರುವ ಭಟ್ಟರು ಸದ್ಯ ಕು೦ಬಳೆ ಸಮೀಪದ ಬೇಳದಲ್ಲಿ ವಾಸಿಸುತ್ತಿದ್ದು ಎಲ್ಲರಿಗೂ ಮಾರ್ಗದರ್ಶಕರಾಗಿದ್ದರೆ.

ಶಿಷ್ಯರೊಬ್ಬರ ಮನೆಯಲ್ಲಿ ನಾಂದಿ ಕಾರ್ಯಕ್ರಮ ಮಾಡಿಸುತ್ತಿರುವುದು ...

No comments: