Wednesday, June 4, 2008

ಯುದ್ದ ಕಾಲೇ ಶಸ್ತ್ರಾಭ್ಯಾಸ ......!

ಮತ್ತೆ ಬಂದಿದೆ ಸೆಮಿಸ್ಟರ್ ಪರೀಕ್ಷೆಗಳು . ಎಲ್ಲ ತಾಂತ್ರಿಕ ವಿಧ್ಯಾರ್ಥಿಗಳಿಗೂ ಬಿಸಿ ಏರಲು ಸುರು ಆಗಿದೆ !
ಸೆಮಿಸ್ಟರ್ ಆದಿಯಲ್ಲಿ ವಿವಿಧ ಕಂಪೆನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ತರಾತುರಿಯಲ್ಲಿ ಪುಸ್ತಕ ಹಿಡಿಯಲೂ ಸಮಯವಿಲ್ಲ ; ಸೆಮಿಸ್ಟರ್ ಮಧ್ಯದಲ್ಲಿ ಕೆಲಸ ಸಿಕ್ಕಿದ ಸಂತೋಷಾಚರಣೆಯಲ್ಲಿ ತರಗತಿಗೆ ಬರಲು ಹೇಗೆ ಸಾಧ್ಯ ? ಒಟ್ಟಿನಲ್ಲಿ ಕೊನೆಯ ಮೂರು ನಾಲ್ಕು ವಾರ ತರಗತಿಗೆ ಮುಖ ತೋರಿಸಿ ಈಗ ಪುಸ್ತಕ ಹಿಡಿದಾಗ "ಏನೋ ಹೊಸತನ್ನು " ನೋಡಿದ ಅನುಭವ ! ಒಂದೂ ತಲೆ ಬುಡ ಗೊತ್ತಾಗದು !

ಇಂಜಿನಿಯರಿಂಗ್ ವಿಷಯಗಳೆಲ್ಲ ಪರಸ್ಪರ ಪೂರಕವಾಗಿರುವಂಥದ್ದು (structured) ; ಒಂದನ್ನು ಅರ್ಥೈಸದೆ ಇನ್ನೊಂದನ್ನು ಕಲಿಯಲು ಸಾಧ್ಯವಿಲ್ಲ . ಒಂದು ರೀತಿಯಲ್ಲಿ ಏಣಿಯಿದ್ದ೦ತೆ.ಎಲ್ಲ ಮೆಟ್ಟಿಲುಗಳನ್ನು ಮೆಟ್ಟಲೇಬೇಕು ಇಲ್ಲದಿದ್ದರೆ ಮೇಲೇರಲು ಆಗದು .

ಇನ್ನು ಕೇವಲ ಬೆರಳೆಣಿಕೆಯ ದಿನಗಳು ಉಳಿದಿವೆ . ಏನು ಮಾಡೋದ್ ಮಗಾ "ಯುದ್ದ ಕಾಲೇ ಶಸ್ತ್ರಾಭ್ಯಾಸ" ಮಾಡಲೇ ಬೇಕು . ಎಲ್ಲಿ ಗೈಡುಗಳು, as per revised V.T.U.book ಗಳು , ಸುಲಭ ದಾರಿಯನ್ನು ನೋಡಲೇ ಬೇಕು .
ಪರೀಕ್ಷೆಯಲ್ಲಿ ನಪಾಸಾದರೆ ನಾಳೆ ತಮ್ಮ ಕಿಸೆಗೆ ಬರುವ ಹಣಕ್ಕೆ ಕೋತಾ! ಮನೆಯಲ್ಲಿ ಅಪ್ಪ ಅಮ್ಮನ ಮುಂದೆ ನಿಲ್ಲುವುದು ಹೇಗೆ ?
ಅದಕ್ಕಿಂತಲೂ ಮುಖ್ಯವಾಗಿ ತಮ್ಮ "ಗೆಳತಿ" ಎಲ್ಲಿ ಕೈತಪ್ಪಿ ಹೋಗುವಳೋ ಎಂಬ ಭಯ ಬೇರೆ !
ಒಟ್ಟಿನಲ್ಲಿ ಇಷ್ಟ ಇದೆಯೋ ಇಲ್ಲವೊ ಓದಲೇ ಬೇಕು.

ಮೊದಲು ಇಂಟರ್ನಲ್ ಮಾರ್ಕ್ಸ್ ಎಲ್ಲ ಲೆಕ್ಕ ಹಾಕಿ , ಇನ್ನು ಎಸ್ಟು ಮಾರ್ಕ್ಸ್ ತೆಗೆಯಬೇಕೆಂಬ ಸ್ಕೆಚ್ ಹಾಕಿದ ಬಳಿಕ ಓದಲು ಆರಂಭ . ಯಾವತ್ತು ಭೇಟಿ ನೀಡದ ಅರಳೀ ಕಟ್ಟೆ ಗಣಪತಿ ದೇವಸ್ಥಾನಕ್ಕೆ ಜನ ಬರುವುದೇ ಪರೀಕ್ಷಾ ಸಮಯದಲ್ಲಿ ; ಅಲ್ಲಿ ಭಕ್ತಿ ಉಕ್ಕಿ ಹರಿಯುವುದನ್ನು ಕಂಡಾಗ ಸ್ವತ: ಗಣಪ್ಪಣ್ಣನಿಗೇ ಕರುಣೆ ಮೂಡಬೇಕು !
ಈಗ ಓದುವ ಸರದಿ.....
ರಾತ್ರಿ ಇಡೀ night out...
ಯಾರು ಹೆಚ್ಚು ನೈಟ್ ಔಟ್ ಮಾಡುತ್ತಾರೋ ಅವರು ವೀರಾಧಿವೀರರು ಅಂತ ಸಾಮಾನ್ಯ ಭಾವನೆ !
ಇನ್ನು ಕೆಲವರು ರಾತ್ರಿ ಮೂರರ ವರೆಗೆ ಓದಿ ಮಲಗಿದ್ದ ತಮ್ಮ ಮಿತ್ರರನ್ನು ಎಬ್ಬಿಸಿ ನಿದ್ದೆಗೆ ಜಾರುವುದು ; ಅಮೇಲೆ ಬೆಳಗ್ಗೆ ಐದರ ಸುಮಾರಿಗೆ ಪುನ ಮುಂದುವರಿಸುವುದು ..... ಇತ್ಯಾದಿ ಇತ್ಯಾದಿ ....
ಈ ಮಧ್ಯೆ ಕೆಲವರು "ವಾರ್ತಾವಾಹಕರು" 'ಆ' ಕಾಲೇಜಿನಲ್ಲಿ 'ಈ' ಪೇಪರ್ ಔಟ್ ಆಗಿದೆಯಂತೆ ಅಂತ ಸುದ್ದಿ ತಂದು ಕುತೂಹಲ ಕೆರಳಿಸುವುದು.......
ಮತ್ತೆ ಓದು ...... ಹೀಗೆ ಸಾಗುತ್ತದೆ ಯುದ್ದ ಕಾಲೇ ಶಸ್ತ್ರಾಭ್ಯಾಸ.....
ಇನ್ನು ಕೆಲವರು ಯುದ್ಧವೇ ಶಸ್ತ್ರಭ್ಯಾಸ ಮಾಡುವವರೂ ಇದ್ದಾರೆ ; ಆದರೆ ಇದು ತೀರಾ ಅಪಾಯಕಾರಿ ..
***
ಮೇಲಿನದ್ದು ಕಾಲೇಜು ಜೀವನದಲ್ಲಾದರೆ ಕೊನೆ ಕ್ಷಣದಲ್ಲಿ ತಯಾರಿ ಮಾಡಲು ಹೊರಡುವುದನ್ನು ಒಂದೇ ಮಾತಿನಲ್ಲಿ "ಯುದ್ದ ಕಾಲೇ ಶಸ್ತ್ರಾಭ್ಯಾಸ " ಅನ್ನುವುದಷ್ಟೆ. ಈಗಲೂ ನಾವು ಅದನ್ನು ಕೆಲವೊಮ್ಮೆ ಮಾಡುತ್ತೇವೆ .ಅಮೇಲೆ ಬೈಸಿಕೊಳ್ಳುತ್ತೇವೆ ಅಷ್ಟೆ !
ಕೆಲವರಿಗಂತೂ ಇದು ಅಭ್ಯಾಸವಾಗಿ ಬಿಟ್ಟಿದೆ . "ಯಾರೇ ಕೂಗಾಡಲಿ , ಊರೇ ಓರಾಡಲಿ.... ನನ್ನ ನೆಮ್ಮದಿಗೆ ಭಂಗವಿಲ್ಲ ... ಅಂತ ಯುದ್ದ ಕಾಲೇ ಶಸ್ತ್ರಾಭ್ಯಾಸ ಮಾಡುತ್ತಲೇ ಇರುತ್ತಾರೆ .
ಏನೇ ಇದ್ದರೂ ಎಲ್ಲರೂ ಒಂದಲ್ಲ ಒಂದು ಸಲ ಈ ಅನುಪಮ ಅನುಭವದ ಭಾಗವಾಗಿದ್ದರೂ ಅದನ್ನು ಪುನಃ ನೆನಪಿಸಿ ಕೊಂಡಾಗ ಮಾತ್ರ ಅವರ್ಣನೀಯ ಆನಂದ ಆಗುವುದು ಖಂಡಿತ ...
"ಅನುಭವವು ಸಿಹಿಯಲ್ಲ ಅದರ ನೆನಪೇ ಸಿಹಿ "... ಅಲ್ಲವೇ ???

3 comments:

Shyam said...

ಅನ್ವರ್ಥ ಮಾತು:
೧. ಬಾಯಾರಿಕೆಯಾದಾಗ ಬಾವಿ ತೋಡಿದಂತೆ.
೨. ಪಿ ಬನ್ನಗ ಪಿತ್ತಿಲ್ ನಾಡ್ಯೆಗೆ.
:-)

Shyam said...

क्लप्त समये उवाच वचनं निरीक्शित परिणामं भवति।

Unknown said...

nice one . keep it up