Thursday, April 24, 2008

ಚುನಾವಣಾಧಿಕಾರಿಯಾಗಿ ನಾನು ...


ಚುನಾವಣೆ ಬಂತೆಂದರೆ ಸಾಕು . ರಾಜಕಾರಣಿಗಳು ನಿದ್ದೆಗೆಟ್ಟು ತಮ್ಮ ಪೀಠವನ್ನು ಭದ್ರ ಪಡಿಸಲು ಸರ್ವ ಸನ್ನಧ್ಧರಾಗುತ್ತಾರೆ. ಇದು ಎಲ್ಲರಿಗೂ ತಿಳಿದ ವಿಚಾರವೇ . ಆದರೆ ಇಲ್ಲಿ ನಾನು ಹೇಳ ಹೊರಟಿರುವುದು ರಾಜಕಾರಣಿಗಳ ಬಗೆಗಲ್ಲ . ಚುನಾವಣಾಧಿಕಾರಿ ನನ್ನ ಮೊದಲ ಅನುಭವದ ಕುರಿತು ಎರಡು ಮಾತುಗಳನ್ನು ಅಷ್ಟೆ.

ಚುನಾವಣೆ ಬಂತೆಂದರೆ ಸಾಕು ಎಲ್ಲ ಅಧ್ಯಾಪಕರಿಗೂ, ಉಪನ್ಯಾಸಕರಿಗೂ ಗ್ರಹಚಾರ ವಕ್ಕರಿಸಿತೆಂದೇ ಅರ್ಥ ! ಯಾಕೆ೦ದರೆ ತಿಪ್ಪರಲಾಗ ಹಾಕಿದರೂ ಚುನಾವಣಾ ಪ್ರಾತ ತಪ್ಪಿಸಿಕೊಳ್ಳಲು ಕಷ್ಟ . ಕಳೆದ ಸಲದ ಚುನಾವಣೆ ನಡೆದಾಗ ನಾನು ಸುಳ್ಯದಲ್ಲಿ ಉಪನ್ಯಾಸಕನಾಗಿ (೨೦೦೨) ಕೆಲಸ ಮಾಡುತ್ತಿದ್ದ ಸಮಯ. ಮೊದಲ ಬಾರಿಗೆ ಚುನಾವಣಾಧಿಕಾರಿ (ಪ್ರಿಸೈಡಿಂಗ್ ಆಫೀಸರ್ ) ಕಾರ್ಯ ನಿರ್ವಹಿಸಬೇಕೆಂಬ ಸರ್ಕಾರದ ಆದೇಶವನ್ನು ಹೊತ್ತ ಪತ್ರವೊಂದನ್ನು ನಮ್ಮ ಜವಾನ ತಂದು ಕೊಟ್ಟಾಗ ಸಂಭ್ರಮ ಪಟ್ಟವರಲ್ಲಿ ನಾನೂ ಒಬ್ಬ . ಒಂದು ದಿನಕ್ಕಾದರೂ ಜಿಲ್ಲಾ ದ೦ಡಾಧಿಕಾರಿಯ ಸಮಾನ ಅರ್ಹತೆಯ ಪದವಿ ಸಿಗುತ್ತದಲ್ಲ ಎಂಬ ಉತ್ಸಾಹ ;ಸಂತೋಷ , ಪುಳಕ ಒಂದು ಕಡೆ ! ಮೊದಲ ಬಾರಿಗೆ ದೊಡ್ಡ ಜವಾಬ್ದಾರಿ ಹೇಗೆ ನಿರ್ವಹಿಸುವುದೆಂಬ ಭೀತಿ ಒಂದೆಡೆ !

ಸರಿ. ೨೭ ನೇ ತಾರೀಕು ಬೆಳಗ್ಗೆ ೧೦ ಗಂಟೆಗೆ ಸರಿಯಾಗಿ ಸುಳ್ಯದ ಪುರಭವನದಲ್ಲಿ ತರಬೇತಿಗಾಗಿ ಒಹ್ಇದು ನನಗೆ


ಚುನಾವಣಾಧಿಕಾರಿ ಇರಬೀಕೆಂದು ಆದೇಶದ ಮೇರೆಗೆ ನಾನು ಹಾಗೂ ಭಕ್ತಿಯಿ೦ದ ಮಿತ್ರರೆಲ್ಲ (ನನ್ನಂತೆ ಗ್ರಹಚಾರ ಕೆಟ್ಟವರು! ) ಅಲ್ಲಿ ಸೇರಿದೆವು. ಮೊದಲ ಬಾರಿಗೆ ವಿಧಾನ ಸಭಾ ಹಾಗೂ ಲೋಕ ಸಭಾ ಚುನಾವಣೆಗೆ ವಿಧ್ಯುನ್ಮಾನ ಮತಯಂತ್ರಗಳನ್ನು ಬಳಸುತ್ತಿರುವುದರಿಂದ ಅದರ ಬಗ್ಗೆ ಸಾಕಷ್ಟು ತರಬೇತಿ /ಮಾಹಿತಿ ನೀಡಲು ಅಲ್ಲಿ ನಮ್ಮನ್ನೆಲ್ಲಾ ಒಟ್ಟು ಸೇರಿಸಿದ್ದರು.

ಮೊದಲಿಗೆ ಮತದಾನ ಯಂತ್ರದ ಮಾಹಿತಿ ಪುಸ್ತಕ ಕನ್ನಡ/ ಇಂಗ್ಲಿಷ್ ಭಾಷೆಯಲ್ಲಿ ನಮಗೆಲ್ಲ ಒದಗಿಸಲಾಯಿತು.


ನಿಜವಾಗಿ ಒಂದು ಸರಕಾರೀ ಸಭೆ ಹೇಗಿರುತ್ತದೆ ಎಂಬ ಸ್ಪಷ್ಟ ಚಿತ್ರಣ ನನಗೆ ದೊರಕಿದ್ದು ಅದೇ ಮೊದಲು .


ಒಂದು ಹನಿ ನೀರನ್ನೂ ಕೊಡದೆ ಮದ್ಯಾಹ್ನ ೧.೨೦ರ ವರೆಗೆ ನಿರಂತರ ಕೊರೆತ !



ನಡು ನಡುವೆ ಮೇಲಧಿಕಾರಿಗಳನ್ನು ವಿಶೇಷವಾಗಿ ಹೊಗಳಿ ಅವರ ಕೃಪಾ ಕಾರುಣ್ಯ ಪಡೆಯಲು ಹಾತೊರೆಯುವ ಕಿರಿಯ ಅಧಿಕಾರಿಗಳು , ಆಗ ತಾನೆ ಮೈಕ್ ಕೈಗೆ ಸಿಕ್ಕಿ ಸಿಕ್ಕಿದ್ದೇ ಅವಕಾಶ ಎಂದು ಕೊರೆಯುವ ಕೆಲ ಹಿರಿ ಕೂಗಿದಾಗಇನ್ನೊಂದು ಕಡೆ ತಮ್ಮನ್ನು ಬಿಟ್ಟು ಬಿಡಿ ಎಂದು ಗೋಗರೆಯುತ್ತಿದ್ದ ಮಧ್ಯ ವಯಸ್ಕ ಶಿಕ್ಷಕಿಯರು ! ಇದನ್ನೆಲ್ಲಾ ನೋಡಿದಾಗ ಇದೊಂದು ಭಯಂಕರ ಕೆಲಸವೇ ಇರಬೆಕೆ೦ಬುದು ಎಂಥವನಿಗೂ ಅರ್ಥವಾಗುತ್ತಿತ್ತು !


ಬಂದದ್ದೆಲ್ಲ ಬರಲಿ ನೋಡೇ ಬಿಡೋಣ ಎಂದು ಬೆಳಗ್ಗಿನಿಂದ ಸಂಜೆಯವರೆಗೆ ಚೆನ್ನಾಗಿ "ತರಬೇತಿ " ಪಡೆದು ಮರಳಿದೆವು .


***

ಚುನಾವಣೆಯ ಮೊದಲು ನಮ್ಮನ್ನೆಲ್ಲಾ ನೆಹರೂ ಸ್ಮಾರಕ ಕೊಡಬೇಕು ಕರೆಸಿದ ಮುಖ್ಯ ಚುನಾವಣಾಧಿಕಾರಿ ಒಬ್ಬೊಬ್ಬರನ್ನಾಗಿ ಸರಕಾರೀ ಬಸ್ ಗೆ ಲೋಡ್ ಮಾಡ ತೊಡಗಿದರು. ಮೊದಲನೆ ಬ್ಯಾಚ್ ನಲ್ಲಿ ನಾನಿದ್ದ ಕಾರಣ ಮಡಿಕೇರಿ ವಿಧಾನ ಸಭೆ/ಲೋಕ ಸಭಾ ಕ್ಷೇತ್ರಕ್ಕೆ ಕರ್ತವ್ಯ ನಿರ್ವಹನೆಗೆಂದು ಮಡಿಕೇರಿಯ ಜ ಕಾರಿಯಪ್ಪ ಸ್ಮಾರಕ ಮಹಾವಿದ್ಯಾಲಯಕ್ಕೆ ತಲುಪಿಸಲಾಯಿತು. ಮಡಿಕೇರಿಯ ಸೊಳ್ಳೆಗಳ ಸಂಪೂರ್ಣ ಪರಿಚಯ ಮಾಡಿದ ನಂತರ ಮರುದಿವಸ ಬೆಳಗ್ಗೆ ನನ್ನೊಂದಿಗೆ ಸಹಾಯಕರಾಗಿ ನಮ್ಮ ಗುಂಪಿನ ಇತರರು (ಫರ್ಸ್ಟ್ ಪೋಲಿಂಗ್, ಸೆಕೆಂಡ್ ಪೋಲಿಂಗ್ , ಥರ್ಡ್ ಹೋಗುವ ಆಫೀಸೆರ್ಸ್ , ಒಬ್ಬ ಪೊಲೀಸ್ ಕಾನ್ಸ್ಟೇಬಲ್ ) ಸೇರಿಕೊಂಡರು . ನಮಗೆ ಕದಗದಾಳು ಎಂಬ ಮತದಾನ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಲು ಸೂಚಿಸಿದ್ದರು . ಅಂತೆಯೇ ಮತದಾನದ ಮುನ್ನ ದಿನ ಆ ಮತದಾನ ಕೇಂದ್ರ ಸೇರಿಕೊಂಡೆವು.


ಅಲ್ಲಿನ ಪರಿಸ್ಥಿತಿಯನ್ನು ನೋಡಿದಾಗ ನಾವೆಲ್ಲ ಹೌಹಾರಿ ಹೋದೆವು !

ಒಂದು ಚಿಕ್ಕ ಅಂಗನವಾಡಿ ಶಾಲೆಯಲ್ಲಿ ಬೂಥನ್ನು ನಿರ್ಮಿಸಬೇಕಾಗಿತ್ತು . ನಮ್ಮ ಕೈಯ್ಯಲ್ಲಿ ೨ ವಿಧ್ಯುನ್ಮಾನ ಮತಯಂತ್ರ , ಇತರ ಕಡತಗಳು ಇದ್ದುವು. ಎಲ್ಲವನ್ನು ಜತನದಿಂದ ನೋಡಿಕೊಳ್ಳ ಬೇಕೆ೦ಬ ಕಟ್ಟಪ್ಪಣೆ ಇದ್ದುದರಿಂದ ಕೈಯಲ್ಲೇ ಹಿದಿದುಕೊ೦ದು ಅದರೊಳಗೆ ನಾವೆಲ್ಲ ಹೊಕ್ಕೆವು . ಸರಿಯಾಗಿ ೪ ಜನರಿಗೆ ಕಾಲು ನೀಡಿ ಕೂರಲೂ ಜಾಗವಿಲ್ಲದ ಆ ರೂಮಿನಲ್ಲಿ ಹೇಗೆ ನಿಭಾಯಿಸುವುದು ಎಂದೇ ನನಗೆ ಯೋಚನೆಯಾಗ ಹತ್ತಿತು. ನನ್ನೊ೦ದಿಗಿದ್ದ ಫರ್ಸ್ಟ್ ಪೋಲಿಂಗ್ ಆಫೀಸರ್ ಈ ಹಿಂದೆ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದ ಅನುಭವದಿಂದ ನನ್ನನ್ನು ಚೆನ್ನಾಗಿ ಹೆದರಿಸ ತೊಡಗಿದರು !! ಅನಿವಾರ್ಯವಾಗಿ ಆ ರಾತ್ರೆಯನ್ನು ಆ ೩ ಮಂದಿ ಸಹೋದ್ಯೋಗಿಗಳೊಂದಿಗೆ ಆ ಪುಟ್ಟ ಕೋಣೆಯಲ್ಲಿ ಸೊಳ್ಳೆಗಳ ಸಂಗೀತದೊಂದಿಗೆ ಮಲಗಿ ಕಳೆದದ್ದಾಯಿತು . ಬೆಳಗ್ಗೆ ಎದ್ದು ಪ್ರಾತ: ಕರ್ಮಕ್ಕೆ ಶೌಚಾಲಯ ಹುಡುಕಿದರೆ ಬಾಗಿಲಿಲ್ಲದ ಶೌಚಾಲಯ ನಮ್ಮನ್ನು ಸ್ವಾಗತಿಸುತ್ತಿತ್ತು !!
ಯಾವುದನ್ನಾದರೂ ತಡೆದುಕೊಳ್ಳಬಹುದು ದೇಹಭಾದೆಯನ್ನಲ್ಲ ಎಂಬ ಸತ್ಯ ನನಗೆ ಅಲ್ಲಿ ಸ್ಪಷ್ಟವಾಗಿ ತಿಳಿಯಿತು !! ಬೆಳಗಿನ್ನೂ ಬೆಳಕು ಹರಿಯದಿದ್ದ ಕಾರಣ ಹೇಗೋ ಸುಧಾರಿಸಿಕೊಂಡೆವು ! ೬.೩೦ಕ್ಕೆ ಸರಿಯಾಗಿ ಸಿದ್ದರಾದ ನಾವು ಕುರುಕ್ಷೇತ್ರದಲ್ಲಿ ಯುದ್ದಕ್ಕೆ ಸಿದ್ದರಾದವರಂತೆ ವಿಧ್ಯುನ್ಮಾನ ಮತ ಯಂತ್ರವನ್ನು ಸಿದ್ದಗೊಳಿಸಿ ಮತದಾರ ಮಹಾ ಪ್ರಭುಗಳಿಗೆ ತಮ್ಮ ಮೂಲಭೂತ ಹಕ್ಕನ್ನು ಚಲಾಯಿಸಲು ಅನುವು ಮಾಡಿ ಕೊಟ್ಟೆವು. ಆಗ ಒಬ್ಬ ವ್ಯಕ್ತಿ ಕೈಯಲ್ಲಿ ಒಂದು ಹೂವಿನ ಹಾರ, ಊದುಕಡ್ಡಿ , ಹಿಡಿದುಕೊ೦ಡು ಬಂದು ಮತ ಯಂತ್ರಕ್ಕೆ ಅದನ್ನಿಟ್ಟು ಭಕ್ತಿಯಿ೦ದ (?) ನಮಸ್ಕರಿಸಿ ತನ್ನ ಆಯ್ಕೆಯ ಅಭ್ಯರ್ಥಿಗೆ ಮತ ನೀಡಿದ ಬಳಿಕ ಒಬ್ಬೊಬ್ಬರಾಗಿ ಜನ ಸಂದೋಹ ಸೇರತೊಡಗಿತು .
ಇಷ್ಟು ಹೊತ್ತಿಗಾಗಲೇ ೯ ಬೆಳಗ್ಗೆ ಗಂಟೆ . ಹೊಟ್ಟೆ ಒಂದೇ ಸಮನೆ ತಾಳ ಹಾಕ ತೊಡಗಿತು . ಹಿಂದಿನ ದಿನ ನಮ್ಮ ಅವಸ್ಥೆಯನ್ನು ಗಮನಿಸಿದ ಪುಣ್ಯಾತ್ಮರೊಬ್ಬರು ನಮಗೆಲ್ಲ ಇಡ್ಲಿ ಸಾಂಬಾರ್ ವ್ಯವಸ್ಥೆ ಮಾಡಿದರು. ಆ ಪ್ರದೇಶದಲ್ಲಿ ಒಂದು ಹೋಟೆಲ್ ಆಗಲೀ , ಕನಿಷ್ಠ ಒಂದು ಗೂದಂಗಡಿಯಾಗಲೀ ಇಲ್ಲದ್ದು ನಮ್ಮ ದುರ್ದೈವ !
ಪ್ರಿಸಿದಿಂಗ್ ಆಫೀಸರ್ ಕರ್ತವ್ಯ , ಜವಾಬ್ದಾರಿ ತುಂಬಾ ಗುರುತರವಾದದ್ದು .
ಎಸ್ಟು ಜನ ಮತದಾನ ಮಾಡಿದರು ? ಗಂಡಸರೆಷ್ಟು ? ಹೆಂಗಸರೆಷ್ಟು ? ಅಂಗವಿಕಲರು , ಅಶಕ್ತರು ಇವರೆಲ್ಲರ ಪಟ್ಟಿಯನ್ನು ಪ್ರತ್ಯೇಕವಾಗಿ ಕೊಡಬೇಕು . ಒಟ್ಟು ೬೭೮ ಸಹಿ ಹಾಕಬೇಕು. ಎಲ್ಲ ಕೆಲಸ ಮಡಿದ ಮೇಲೆ ತಲೆ ಚಿತ್ರಾನ್ನ್ನ ವಾಗಿ ಬಿಡುವಷ್ಟು ಕೆಲಸ ಇದೆ. ಏನೇ ಸಮಸ್ಯೆ ಬಂದರೂ ಕೂಡಲೇ ಪರಿಹಾರ ಮಾಡಬೇಕು . ಪೋಲಿಂಗ್ ಏಜೆಂಟ್ ಕೇಳುವ ಅವನ್ನು ಕಂಟ್ರೋಲ್ ಮಾಡುವ ಕೆಲಸವೂ ಕೆಲವೊಮ್ಮೆ ಬರುತ್ತದೆ. ಒಬ್ಬ ಪೊಲೀಸ್ ನಮಗೆ ಮೂವರಿಗೆ ರಕ್ಷಣೆ ಕೊಡಲು ಇರುತ್ತಾರೆ. ಒಂದು ಗುಂಪು ಜನ ಬಂದು ಧಾಳಿ ಮಾಡಿದರೆ ಮೊದಲು escape ಆಗುವುದೂ ಅವರೇ!
ಅಂತೂ ಸಾ೦ಗವಾಗಿ ಮತದಾನ ಮುಗಿಸಿ ಮರಳಿ ಮತ ಯಂತ್ರಗಳನ್ನು ಒಪ್ಪಿಸಲು ಬಂದಾಗ ಅಲ್ಲಿನ ನೂಕು ನುಗ್ಗಲು ನೋಡಿ ನಮ್ಮ ತಲೆ ತಿರುಗಿತು . ಒಮ್ಮೆ ಇಲ್ಲಿಂದ ಪಾರು ಮಾಡು ಶಿವನೇ ... ಎಂದು ದೇವರಲ್ಲಿ ಬೇಡಿಕೊಂಡೆ. ಭಗವಂತನಿಗೆ ನನ್ನ ಕೂಗು ಕೇಳಿಸಿತು ; ನನ್ನ ಹೆಸರನ್ನು ಮೈಕ್ ನಲ್ಲಿ ಕೂಗಿದಾಗ " ಬದುಕಿದೆಯಾ ಬಡ ಜೀವವೇ " ಎಂದು ಮರಳಿ ಕೊಟ್ಟು ಬಂದೆ . ಒಟ್ಟಿನಲ್ಲಿ
ಅನುಭವವು ಸಿಹಿಯಲ್ಲ ಎಂಬುದು ೧೦೦% ಖಚಿತವಾಯಿತು.
ಈಗ ಮತ್ತೆ ಬಂದಿದೆ ಚುನಾವಣೆ ! ಮತ್ತೆ ಪುನಾ ಬಂದಿದೆ ಚುನಾವಣಾಧಿಕಾರಿ ಕರೆಯೋಲೆ !!
ಈ ಸಲ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ . ಎಲ್ಲಿದೆಯೋ ಗೊತ್ತಿಲ್ಲ ; ಪುನ: ಯಾರು ಸಹಾಯಕರಾಗಿ ಸಿಗುವರೋ ?
ಭಯ ಮಿಶ್ರಿತ ಕುತೂಹಲದಲ್ಲಿದ್ದೇನೆ.
ಹೋಗಿ ಬಂದ ಮೇಲೆ ಹೀಗಾಯಿತು ಅಂತ ವಿವರಿಸುತ್ತೇನೆ . ಅಲ್ಲಿವರೆಗೆ ನಮಸ್ಕಾರ....

1 comment:

Unknown said...

Its really a nice article !! thats a lot Manya!!!