Thursday, July 3, 2008
ಯಕ್ಷ ದಿಗ್ಗಜರ ಸಮ್ಮಿಲನ ...
http://www.youtube.com/watch?v=z9frEiHBvzk
ದಿವಾಣ ಭೀಮಜ್ಜ ವಿಷಮ ಪೆಟ್ಟು ಬಾರಿಸುವುದರಲ್ಲಿ ಎತ್ತಿದ ಕೈ ಆಗಿದ್ದರಂತೆ . ಚೆಂಡೆ ಮದ್ದಲೆಗಳಲ್ಲದೆ ಭಾಗವತಿಕೆಯನ್ನು ಕೂಡ ಅಮೂಲಾಗ್ರವಾಗಿ ತಿಳಿದಿದ್ದ ಭೀಮಜ್ಜ ವೇಷಧಾರಿಗಳನ್ನು ತಿದ್ದುವುದರಲ್ಲಿ ಪರಿಣತರಾಗಿದ್ದರಂತೆ . ಕೋಪ ಮೂಗಿನ ಮೇಲೆ ಇದ್ದ ಇವರಿಗೆ ಅಷ್ಟೆ ಮುಗ್ಧತೆಯೂ ಮೈಗೂಡಿತ್ತು ಎಂದು ಅಪ್ಪ ಆಗಾಗ ಮನೆಯಲ್ಲಿ ಹೇಳುತ್ತಿದ್ದುದುಂಟು .
ಇದನ್ನು ನೋಡುವಾಗ ಎಂಥ ಕಲಾವಿದರು ಕಾಲಗರ್ಭಕ್ಕೆ ಸಂದು ಹೋದರು ಎಂಬುದು ನಮಗರಿವಾಗುತ್ತದೆ .
ಮೇಲಿನ ಕೊಂಡಿಯಲ್ಲಿ ಈ ಅಪರೂಪದ ಕಲಾವಿದರಾದ ದಿವಾಣ ಭೀಮ ಭಟ್ ಹಾಗೂ ನೆಡ್ಲೆ ನರಸಿಂಹ ಭಟ್ ಬಲಿಪಜ್ಜರಿಗೆ ಸಾಥ್ ನೀಡಿದ್ದರು ನೋಡಿ ಆನಂದಿಸಿ...
Monday, June 30, 2008
ಚತುರ್ವೇದ ಸ೦ಹಿತಾ ಯಾಗ ...
ತುಮಕೂರಿನ ಬಳಿಯ ಗುಬ್ಬಿ ಎ೦ಬ ಊರು ವೀರಣ್ಣ ನವರಂಥ ಮಹಾನ್ ಕಲಾ ತಪಸ್ವಿಯನ್ನು ನಾಡಿಗೆ ಕೊಟ್ಟ ಸ್ಥಳ . ಇಲ್ಲಿಗೆ ಸಮೀಪದಲ್ಲಿ ಇಕ ಹಿಂದೆ ಸ್ಥಾಪಿತವಾದ "ಚಿದಂಬರಾಶ್ರಮ" ಪ್ರಕೃತಿಯ ಸುಂದರ ಮಡಿಲಲ್ಲಿ ಕಂಗೊಳಿಸುವ ಪುಟ್ಟ ಆಶ್ರಮ . ವಿದ್ಯಾಕಾಂಕ್ಷಿಗಳಾಗಿ ಬಂದ ಮಕ್ಕಳಿಗೆ ಸನಾತನೀಯವಾದ ಉತ್ತಮ ಸಂಸ್ಕಾರಯುತ ಶಿಕ್ಷಣವನ್ನು ಉಚಿತವಾಗಿ ನೀಡುತ್ತಾ ಬಂದಿದೆ. ಮೊನ್ನೆ ದೂರದರ್ಶನದಲ್ಲಿ ಈ ಆಶ್ರಮದ ಬಗ್ಗೆ ಒಂದು ಕಾರ್ಯಕ್ರಮ ಬಂದಿತ್ತು. ಇಲ್ಲಿ ಚತುರ್ವೇದ ಸಂಹಿತಾ ಯಾಗವು ನಡೆಯಲಿದ್ದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಇತ್ಯಾದಿ ವಿವರಣೆ ಸಿಕ್ಕಿದ ನನಗೆ ಸಹಜವಾಗಿ ಆ ಕಡೆ ಆಕರ್ಷಣೆ ಉಂಟಾದದ್ದು ನನ್ನ ಪ್ರೀತಿಯ "ಯಕ್ಷಗಾನ ತಾಳಮದ್ದಲೆ " ಬಲಿಪ ಪ್ರಸಾದ ಭಾಗವತರ ತಂಡದಿಂದ ನಡೆಸಿಕೊಡಲ್ಪಡುತ್ತದೆ ಎಂಬ ವಿಚಾರ ತಿಳಿದಾಗ !
ಜೂನ್ 28ನೆ ಶನಿವಾರ ಹಾಗೂ ೨೯ನೆ ರವಿವಾರ ಬಲಿಪ ಬಳಗದ ಯಕ್ಷಗಾನ ತಾಳಮದ್ದಲೆ ನೋಡಲು ಹೋದ ನನಗೆ ಆಶ್ರಮವನ್ನು ಪ್ರವೇಶಿಸುತ್ತಿದ್ದಂತೆ ಪೂಜ್ಯ ಭಾವನೆ ಉಂಟಾಯಿತು . ಯಾಗ ಶಾಲೆಯ ನಿರ್ಮಾಣ ಅದ್ಭುತವಾಗಿತ್ತು .
ನಾಲ್ಕು ವೇದಗಳ ಮಂತ್ರಗಳ ಸಹಿತ ನಡೆಯುತ್ತಿದ್ದ ಈ ಯಾಗದಲ್ಲಿ ಬಹಳ ಅಪೂರ್ವವಾದ ಸಾಮಗಾನ ಕೇಳಲು ಕರ್ಣಾನಂದವಾಗಿತ್ತು. ಬಳಿಕ ನಡೆದ ಅಷ್ಟಾವಧಾನ ಸೇವೆಯಲ್ಲಿ ಬಲಿಪ ಪ್ರಸಾದ ರ ಸ್ತುತಿಪದವಂತೂ ಬಲು ಸುಂದರವಾಗಿತ್ತು .
ಶೂರ್ಪನಖಾ ಮಾನಭಂಗ ಹಾಗೂ ಕೃಷ್ಣ ಸಂಧಾನ ತಳಮದ್ದಾಳೆ ೨ ದಿನಗಳಂದು ಕ್ರಮವಾಗಿ ನಡೆದವು . ಯಾಗದ ಪೂರ್ಣಾಹುತಿ ಇದೆ ಬರುವ ಜುಲೈ ೨ ರಂದು ನಡೆಯಲಿದ್ದು ಆಸಕ್ತರು ಭಾಗವಹಿಸಬಹುದು .
ಚಿದಂಬರಾಶ್ರಮದ ಬಗ್ಗೆ ತಿಳಿಯಲು http://www.chidambaraashrama.org/ ತಾಣವನ್ನು ನೋಡಿ .
Friday, June 27, 2008
ದಿವಾಣ ಶಿವಶಂಕರ ಭಟ್
ಅವರ ಒಂದು ಪ್ರವೇಶ ಇಲ್ಲಿ ನೋಡಬಹುದು .
http://www.youtube.com/watch?v=eHaIb0C60aQ
Friday, June 20, 2008
ಶಿಶು ಗೀತೆಗಳು ...
Friday, June 6, 2008
ಮರೆಯಾಗುತ್ತಿರುವ ಪೂರ್ವರಂಗ ...

ಯಕ್ಹಗಾನದಲ್ಲಿ ಪೂರ್ವರಂಗವೆಂಬುದು ಮೂಲ ಪಾಠ . ಅದನ್ನು ಚೆನ್ನಾಗಿ ಬಲ್ಲವನಿಗೆ ಯಾವುದೇ ಪ್ರಸಂಗವನ್ನೂ ನಿರರ್ಗಳವಾಗಿ ಆಡಿ ತೋರಿಸುವ ಸಾಮರ್ಥ್ಯ ಬರುತ್ತದೆ . ಸ್ತುತಿ ಪದ್ಯಗಳು , ಕೋಡಂಗಿ, ಬಾಲಗೊಪಾಲ ,ಷಣ್ಮುಖಸುಬ್ರಾಯ , ಅರ್ಧ ನಾರಿ, ಮುಖ್ಯ ಸ್ತ್ರೀವೇಶ, ಹಾಸ್ಯ , ಬಣ್ಣದ ವೇಷ , ರಾಮನ ಒಡ್ಡೋಲಗ , ಕೃಷ್ಣನ ಒಡ್ಡೋಲಗ , ಪಾಂಡವರ ಒಡ್ಡೋಲಗ, ಹೊಗಳಿಕೆ ಪ್ರಸಂಗ ಪೀಠಿಕೆ , ಮಂಗಳ ಪದಗಳು , ಸಭಾಲಕ್ಷಣ ಮುಂತಾದ ಎಲ್ಲ ವಿಚಾರಗಳ ಬಗ್ಗೆ ಪೂರ್ಣ ಮಾಹಿತಿ ಇದೆ .
Thursday, June 5, 2008
ವಿಷಕ್ರಿಮಿ ನ್ಯಾಯ ......
ಈಗ ನಾನಿಲ್ಲಿ ಹೇಳಹೊರಟದ್ದು ಇನ್ನೊ೦ದು ಸ್ವಾರಸ್ಯಕರ ನ್ಯಾಯದ ಬಗ್ಗೆ. ಅದೇ ವಿಷಕ್ರಿಮಿ ನ್ಯಾಯ . ವೆಂಕಣ್ಣಯ್ಯನೆಂಬ ಒಬ್ಬಾತ ದೇಶ ಸಂಚಾರಕ್ಕೆ ಹೊರಟಿರುತ್ತಾನೆ . ಹೀಗೇ ಹಲವು ಗ್ರಾಮಗಳನ್ನು ಕಳೆದು ಮುಂದುವರಿಯುವ ವೇಳೆ ಒಂದು ಪುಟ್ಟ ಗ್ರಾಮಕ್ಕೆ ಬರುವಾಗ ಕತ್ತಲೆಯಾಗತೊಡಗಿತು . ಆಗ ಆ ಗ್ರಾಮದಲ್ಲಿ ಉಳಕೊಳ್ಳಲು ಏನಾದರೂ ಆಗಬೇಕಲ್ಲ ಎಂದು ಯೋಚಿಸಿ ಎದುರಿಗೆ ಸಿಕ್ಕ ಗ್ರಾಮಸ್ಥನೊಬ್ಬನನ್ನು ಕುರಿತು ವಿಚಾರಿಸುತ್ತಾನೆ .
ವೆ೦ : " ಅಯ್ಯಾ ಈ ಊರಿನಲ್ಲಿ ದೊಡ್ಡವರು ಯಾರಿದ್ದಾರೆ ?"
ಗ್ರಾಮಸ್ಥ :(ಏನೋ ಯೋಚಿಸುತ್ತಾ) " ತಾಳೆ ಮರಕ್ಕಿಂತ ದೊಡ್ಡವರು ಯಾರೂ ಇಲ್ಲ ".
ವೆ೦: "ಹೋಗಲಿ ಯಾರು ದಾನಿಗಳಿದ್ದಾರೆ ?"
ಗ್ರಾ.: "ಬಾಯಿ ಮಾತಿನಲ್ಲಿ ಎಲ್ಲರೂ ದಾನಿಗಳೇ "
ವೆ೦: ಹೋಗಲಿ ಯಾರು ದಕ್ಷರಿದ್ದಾರೆ ?"
ಗ್ರಾ.: "ಇನ್ನೊಬ್ಬರ ಸಂಪತ್ತನ್ನು ಅಪಹರಿಸುವುದರಲ್ಲಿ ಎಲ್ಲರೂ ದಕ್ಷರೆ "
ಇಷ್ಟು ಹೊತ್ತಿಗೆ ತಲೆಬಿಸಿಯಾಗಿ ವೆಂಕಣ್ಣಯ್ಯಕೇಳುತ್ತಾನೆ " ಅಯ್ಯಾ ಇಲ್ಲಿ ನೀವು ಹೇಗಪ್ಪಾ ಬದುಕುತ್ತೀರಿ ??"
ಗ್ರಾ: "ವಿಷ ಕ್ರಿಮಿ ನ್ಯಾಯದಂತೆ "
ವೆ೦: ಅದೇನು ವಿಷಕ್ರಿಮಿ ನ್ಯಾಯ ಅಂದರೆ !!??"
ಗ್ರಾ:" ಅಯ್ಯಾ ಉಪ್ಪಿನಕಾಯಿ ಕಣ್ಣಿಗೆ ಬಿದ್ದರೆ ಏನಾಗುತ್ತದೆ ಹೇಳು ?"
ವೆ೦: " ಕಣ್ಣು ಉರಿಯುತ್ತದೆ "
ಗ್ರಾ: " ಆದರೆ ಉಪ್ಪಿನಕಾಯಿಯಲ್ಲಿಯೇ ಹುಟ್ಟಿದ ಹುಳಕ್ಕೆ ಕಣ್ಣು ಉರಿಯುತ್ತದೆಯೇ ?? "
ವೆ೦: "ಇಲ್ಲ !!!!"
ಹಾಗೆಯೇ ಇಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದ ನನಗೆ ಇದು ಅಭ್ಯಾಸವಾಗಿ ಹೋಗಿದೆ . ನಿನಗೆ ಮಾತ್ರ ಇದು ಹೊಸತು ಅಷ್ಟೆ !!
ಅಂತ ನಿರಾಳವಾಗಿ ಹೇಳಿದ .
ಈಗಿನ ಹೆಚ್ಚಿನ ಎಲ್ಲ ರಾಜಕಾರಣಿಗಳೂ "ವಿಷಕ್ರಿಮಿ ನ್ಯಾಯದ " ಹಾಗೆಯೇ ನಡೆಯುತ್ತಿರುವುದರಿಂದ ಹೆಚ್ಚಿನ ಪ್ರಗತಿಯಾದೀತು ಎಂಬ ಭ್ರಮೆ ಮಾತ್ರ ಸಾಮಾನ್ಯ ನಾಗರೀಕರಾದ ನಮಗೆ ಬೇಡ ಅಂತ ನನಗನಿಸುತ್ತದೆ.
ನೀವೇನಂತೀರಿ?
Wednesday, June 4, 2008
ಯುದ್ದ ಕಾಲೇ ಶಸ್ತ್ರಾಭ್ಯಾಸ ......!
ರಾತ್ರಿ ಇಡೀ night out...
ಯಾರು ಹೆಚ್ಚು ನೈಟ್ ಔಟ್ ಮಾಡುತ್ತಾರೋ ಅವರು ವೀರಾಧಿವೀರರು ಅಂತ ಸಾಮಾನ್ಯ ಭಾವನೆ !
ಇನ್ನು ಕೆಲವರು ರಾತ್ರಿ ಮೂರರ ವರೆಗೆ ಓದಿ ಮಲಗಿದ್ದ ತಮ್ಮ ಮಿತ್ರರನ್ನು ಎಬ್ಬಿಸಿ ನಿದ್ದೆಗೆ ಜಾರುವುದು ; ಅಮೇಲೆ ಬೆಳಗ್ಗೆ ಐದರ ಸುಮಾರಿಗೆ ಪುನ ಮುಂದುವರಿಸುವುದು ..... ಇತ್ಯಾದಿ ಇತ್ಯಾದಿ ....
ಈ ಮಧ್ಯೆ ಕೆಲವರು "ವಾರ್ತಾವಾಹಕರು" 'ಆ' ಕಾಲೇಜಿನಲ್ಲಿ 'ಈ' ಪೇಪರ್ ಔಟ್ ಆಗಿದೆಯಂತೆ ಅಂತ ಸುದ್ದಿ ತಂದು ಕುತೂಹಲ ಕೆರಳಿಸುವುದು.......
ಮತ್ತೆ ಓದು ...... ಹೀಗೆ ಸಾಗುತ್ತದೆ ಯುದ್ದ ಕಾಲೇ ಶಸ್ತ್ರಾಭ್ಯಾಸ.....
ಇನ್ನು ಕೆಲವರು ಯುದ್ಧವೇ ಶಸ್ತ್ರಭ್ಯಾಸ ಮಾಡುವವರೂ ಇದ್ದಾರೆ ; ಆದರೆ ಇದು ತೀರಾ ಅಪಾಯಕಾರಿ ..
***