Tuesday, July 27, 2010

ಮನ ಮುಟ್ಟುವ ಶ್ಲೋಕ ...

ಹರಿ ಹರರಲ್ಲಿ ಬೇಧವಿಲ್ಲ ಎಂದು ಸಾರಲು ಕವಿಯೊಬ್ಬ ಹರಿಹರರನ್ನು ಒಟ್ಟಾಗಿ ಒಂದೇ ಶ್ಲೋಕದಲ್ಲಿ ಪ್ರಾರ್ಥಿಸಿದ್ದು ಹೀಗೆ..
ಪಾಯಾತ್ ಕುಮಾರಜನಕ: ಶಶಿಖಂಡಮೌಳಿ:
ಶಂಖಪ್ರಭಶ್ಚ  ನಿಧನಶ್ಚ ಗವೀಶಯಾನ:
ಗಂಗಾಂಚ ಪನ್ನಗಧರಶ್ಚ ಉಮಾವಿಲಾಸ:
ಆದ್ಯಕ್ಷರ ರಹಿತೋ ಸಹಿತೋಪಿ ದೇವ:

ಇದರಲ್ಲಿ ಮೊದಲ ಅಕ್ಷರ ಸೇರಿಸಿದರೆ ಶಿವನ ಸ್ತುತಿಯಾಗುತ್ತದೆ. ಮೊದಲ ಅಕ್ಷರ ಬಿಟ್ಟರೆ ವಿಷ್ಣುವಿನ ಸ್ತುತಿಯಾಗುತ್ತದೆ. ಮೊದಲ ಅಕ್ಷರವಿದ್ದರೂ ಇಲ್ಲದಿದ್ದರೂ ದೇವರನ್ನೇ ಸ್ತುತಿಸಿದಂತಾಗುತ್ತದೆ.

ಕುಮಾರಜನಕ:= ಕುಮಾರನ ತಂದೆ =ಶಿವ ; ಮಾರ ಜನಕ:= ಮನ್ಮಥನ ತಂದೆ =ವಿಷ್ಣು, ಶಶಿಖಂಡಮೌಳಿ:= ಚಂದ್ರಶೇಖರ , ಶಿಖಂಡಮೌಳಿ:=ನವಿಲುಗರಿಯನ್ನು ಧರಿಸಿದಾತ= ವಿಷ್ಣು/ಕೃಷ್ಣ , ಶಂಖಪ್ರಭ = ಬಿಳಿಬಣ್ಣದವ (ಶಿವ ) , ಖಪ್ರಭ=ಆಕಾಶ ಬಣ್ಣದವ =ವಿಷ್ಣು, ನಿಧನ=ಶಿವ, ಧನ=ವಿಷ್ಣು, ಗವೀಶಯಾನ: = ನಂದಿವಾಹನ , ವೀಶಯಾನ:=ಪಕ್ಷಿವಾಹನ , ಗಂಗಾಂಚ = ಗಂಗಾಧರ , ಗಾಂಚ =ಗೋಪಾಲ ಪನ್ನಗಧರ =ನಾಗಭೂಷಣ,ನಗಧರ = ವಿಷ್ಣು, ಉಮಾವಿಲಾಸ:= ಶಿವ , ಮಾವಿಲಾಸ: =ವಿಷ್ಣು
ಹಾಗಾಗಿ ಮೊದಲ ಅಕ್ಷರ ಸೇರಿಸಿದರೂ ಬಿಟ್ಟರೂ ದೇವರನ್ನು ನೆನೆದಂತೆಯೇ ಆಗುವುದು .

ಅರ್ಥಪೂರ್ಣವಾದ ಈ ಶ್ಲೋಕ ಎಷ್ಟು ಸೊಗಸಾಗಿದೆಯಲ್ಲವೇ ?

10 comments:

Anonymous said...

good one..

ತೇಜಸ್ವಿನಿ ಹೆಗಡೆ said...

ತುಂಬಾ ಚೆನ್ನಾಗಿದೆ.. ಬಹು ಹಿಂದೆ ಕೇಳಿದ್ದೆ...

Harisha - ಹರೀಶ said...

ಬಹಳ ಚೆನ್ನಾಗಿದೆ.. ಯಾರು ಬರೆದಿದ್ದು/ಎಲ್ಲಿ ಇದೆ ಎಂಬುದರ ಬಗ್ಗೆ ಏನಾದರೂ ಮಾಹಿತಿಯಿದ್ದರೆ ತಿಳಿಸಿ

Anonymous said...

Very nice meaningful and witty shloka. Appreciate the intelligence of the poet!!.
D.M.SAgar

Rajesh A said...

Nice one. Vidyananda shenoy avara Bharata Darshana dalli kelida nenapu

Anonymous said...

ಒಳ್ಳೆ ಚಮತ್ಕಾರದ ಶ್ಲೋಕ . ಅಡ್ಡನಾಮಕ್ಕು ಸೈ ಉದ್ದನಾಮಕ್ಕು ಸೈ ! ಚೆನ್ನಾಗಿದೆ . ಇನ್ನು ಇಂಥ ಶ್ಲೋಕವಿದ್ದರೆ ತಿಳಿಸಿ .

ನಾಗರಾಜ ರಾವ್ ,
ಸುಮನಾ , ಪುಣೆ

ಸುಬ್ರಹ್ಮಣ್ಯ ಭಟ್ said...

Actually this shloka i heard in on of the "GAMAKA" program held at tumkur. veda brahma Mattur Keshavamoorty told this shloka on that day. I liked it too much. so published here. thanks for your comments.

Anonymous said...

интересно, но видео бесплатно на huk.su

Vallish Kumar S said...

ಹರಿ-ಹರರ ಆರಾಧಕರು ಒಂದಾಗಲು ಇದೊಂದು ಆಶಾ ಸಂದೇಶ :)

Srikanth said...

ಬಹಳ ಚೆನ್ನಾಗಿದೆ... ಸಂಗ್ರಹಿಸಿ ಪ್ರಕಟಿಸದ್ದಕ್ಕೆ ಧನ್ಯವಾದಗಳು