Friday, May 22, 2009

ಯಕ್ಷ ಬ್ರಹ್ಮ ಅಗರಿ ಶ್ರೀನಿವಾಸ ಭಾಗವತರು ಒಂದು ಸ್ಮರಣೆ .....

ಅಗರಿ ಶ್ರೀನಿವಾಸ ಭಾಗವತರು ಯಕ್ಷ ರಂಗದ ಅನರ್ಘ್ಯ ರತ್ನಗಳಲ್ಲಿ ಒಬ್ಬರು. ಇಂದು (೨೨-೦೫-೨೦೦೯) ಅವರ ೧೦೩ ನೆ ಜನ್ಮ ದಿನ. ಭಾಗವತನಾಗಿ , ಪ್ರಸಂಗ ಕರ್ತನಾಗಿ ಎಲ್ಲಕ್ಕಿಂತ ಮಿಗಿಲಾಗಿ ಯಕ್ಷಗಾನದ ಸಮಗ್ರ ಮಾಹಿತಿಯಿದ್ದ ಅಗರಿಯವರು ಯಕ್ಷ ರಂಗ ಕಂಡ ಅದ್ಭುತಗಳಲ್ಲಿ ಒಬ್ಬರು. ೨೦ಕ್ಕೂ ಹೆಚ್ಚು ಪ್ರಸಂಗಗಳನ್ನು ರಚಿಸಿದ ಇವರು ಆಶುಕವಿಯಾಗಿದ್ದವರು .


ಅಗರಿಯವರು ಪದ್ಯಕ್ಕೆ ಕೂರುವ ಮುನ್ನ ಸಭಾವಂದನೆ ಮಾಡುತ್ತಿದ್ದ ಕ್ರಮವನ್ನು ಕೆಳಗಿನ ವಿಡಿಯೋ ದಲ್ಲಿ ಕಾಣಬಹುದು .






ಇವರ ಸ್ಮರಣಾರ್ಥ ಅಗರಿಯವರು ರಚಿಸಿದ ಲಭ್ಯವಿರುವ ಎಲ್ಲ ಪ್ರಸಂಗಗಳನ್ನು ಒಂದುಗೂಡಿಸಿ ಪ್ರಸ೦ಗ ಮಾಲಿಕೆಯೊಂದನ್ನು ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಘಟಕದವರು ಬಿಡುಗಡೆ ಮಾಡಿದ್ದು ಮಾರುಕಟ್ಟೆಯಲ್ಲಿ ಲಭ್ಯವಿದೆ .


ಇದರಲ್ಲಿ ಅಗರಿಯವರ ಕುರಿತ ಲೇಖನಗಳು , ದೇವಿ ಮಹಾತ್ಮೆ ,ಬ್ರಹ್ಮ ಕಪಾಲ, ಬಪ್ಪನಾಡುಕ್ಷೇತ್ರ ಮಹಾತ್ಮೆ , ವೆಂಕಟೇಶ ಮಹಾತ್ಮೆ ( ತಿರುಪತಿ ಕ್ಷೇತ್ರ ಮಹಾತ್ಮೆ ), ಧನಗುಪ್ತ ಮಹಾಬಲಿ , ಶ್ರೀದೇವಿ ಲಲಿತೋಪಖ್ಯಾನ, ಮೊದಲಾದ ಅಗರಿಯವರು ರಚಿಸಿದ ಎಲ್ಲ ಪ್ರಸಂಗಗಳು, ಆಚಾರ ವಿಚಾರವೆಂಬ ಪದ್ಯ ಅಲ್ಲದೆ ಅಗರಿಯವರು ರಚಿಸಿದ ಕೀರ್ತನೆಗಳು ಪ್ರಕಟವಾಗಿದೆ .ಅಗರಿಯವರ ಬಗ್ಗೆ ಸಮಗ್ರ ಮಾಹಿತಿ ಒಂದೇ ಸಂಪುಟದಲ್ಲಿ ಲಭ್ಯವಾಗುವಂತೆ ಮಾಡಿದ ಕೀರ್ತಿ ಅದರ ಪ್ರಧಾನ ಸಂಪಾದಕರಿಗೆ ಸಲ್ಲಬೇಕು.
ಅಗರಿಯವರ ಧನಗುಪ್ತ ಮಹಾಬಲಿ ಪ್ರಸಂಗದ ಮಧುರವಾದ ಹಾಡು ಕೆಳಗಿನ ತಾಣದಲ್ಲಿ ಕೇಳಬಹುದು .

ಬಲು ಪ್ರಸಿದ್ಧ ಬಪ್ಪನಾಡು ಕ್ಷೇತ್ರ ಮಹಾತ್ಮೆಯ ತುಣುಕನ್ನು ಕೆಳಗಿನ ವಿಡಿಯೋ ದಲ್ಲಿ ವೀಕ್ಷಿಸಬಹುದು .


ಇಂತಹ ಯಕ್ಷಗಾನದ ಶಕಪುರುಷನನ್ನು ಸದಾ ಸ್ಮರಿಸಬೇಕಾದ್ದು ಯಕ್ಷಪ್ರೇಮಿಗಳಾದ ನಮ್ಮೆಲ್ಲರ ಕರ್ತವ್ಯ